ಬೆಂಗಳೂರು prajakiran.com : ಕಾಗೋಡು ಹೋರಾಟದ ಸಂದರ್ಭದಲ್ಲಿ ನಡೆದ ರೈತರ ಹಕ್ಕೋತ್ತಾಯದ ಪ್ರತಿಫಲವಾಗಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಜಾರಿಗೆ ತಂದಿದ್ದರು. ಅವರು ಅಂದು ತಂದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆಯಾಗಿತ್ತು.
ಆದರೆ ಇಂದಿನ ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯ ರೈತ ವಿರೋಧಿ ಸರಕಾರ ಭೂ ಸುಧಾರಣೆ ಕಾಯ್ದೆಯ 79 ಎ ಅನ್ನು ರದ್ದು ಮಾಡುವ ಮೂಲಕ ಕೃಷಿಯೇತರ ಬಾಬ್ ನಿಂದ ಭೂಮಿ ಖರೀದಿಸಲು ಅನುವು ಮಾಡಿರುವುದು ರೈತ ವಿರೋಧಿ ಕಾಯ್ದೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದಅವರು ಹೊಸ ತಿದ್ದುಪಡಿ ಮಾಡಿರುವುದು ಸರಿಯಲ್ಲ. ಅದನ್ನು ತಕ್ಷಣ ರಾಜ್ಯದ ಬಿಜೆಪಿ ಸರಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಬಿಜೆಪಿಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದಅವರು @siddaramaiah ರೈತರಿಗೆ ವರದಾನವಾಗಿದ್ದ ‘ಭೂಸುಧಾರಣಾ ಕಾಯ್ದೆ’ಗೆ ತಿದ್ದುಪಡಿ ತಂದು ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು
ಈಗಾಗಲೇ ರೈತರ ಭೂಮಿಯನ್ನು ಆಕ್ರಮಿಸಲು ಮತ್ತು ಈಗಾಗಲೇ ಆಕ್ರಮಿಸಿದ ಭೂಮಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಂಚಿನ ಭಾಗವಾಗಿ @BJP4Karnatakaಬಿಜೆಪಿಯ ಕರ್ನಾಟಕ ಸರ್ಕಾರವು ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿರುವ ಸಾಧ್ಯತೆಯಿದ್ದು, ಕೇವಲ ಮೈಸೂರು ಭಾಗದಲ್ಲೇ 2250 ಕ್ಕೂ ಹೆಚ್ಚು ಪ್ರಕರಣಗಳು ರದ್ದಾಗಿದ್ದು ನನ್ನ ಈ ಮೇಲಿನ ಮಾತಿಗೆ ಸಾಕ್ಷಿ ಎನ್ನಬಹುದು ಎಂದು ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ಆರೋಪಿಸಿದ್ದಾರೆ.