ಅಂತಾರಾಷ್ಟ್ರೀಯ

ಸಿಎಂ, ರಾಜ್ಯದ ಸಂಸದರಿಗೆ ‘ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್’ ಎಂದ ಸಿದ್ದು

ಬೆಂಗಳೂರು prajakiran.com : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅದು ಕಟು ಶಬ್ದಗಳನ್ನು ಬಳಸಿ,
’ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್’ ಎಂದು ಹೇಳುವ ಮೂಲಕ ಕುಟುಕಿದರು.

ಸಿಎಂ ಯಡಿಯೂರಪ್ಪ ಆಗಲಿ, ರಾಜ್ಯದ ಬಿಜೆಪಿ ಸಂಸದರಾಗಲಿ ಯಾರೊಬ್ಬರೂ ಕೇಂದ್ರ ಸರಕಾರದ ಮುಂದೆ ಮಾತನಾಡುವುದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಮುಂದೆ ಇವರೆಲ್ಲರೂ ಮೂಕರಾಗಿ, ಕೈ ಕಟ್ಟಿ, ಮೌನಕ್ಕೆ ಶರಣಾಗುತ್ತಿದ್ದಾರೆ.

ಸಿಎಂ ಬಿಎಸ್ ವೈ ಅವರಂತು ಪ್ರಧಾನಿ ಎದುರು ಉಸಿರು ಕೂಡ ಎತ್ತಲ್ಲ. ಇದು ಹೇಗೆಂದರೆ ’ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್’ ಎನ್ನುವಂತಿದೆ ಎಂದು ಗದಾ ಪ್ರಹಾರ ಮಾಡಿದರು.

ರಾಜ್ಯಕ್ಕೆ ಬರುತ್ತಿರುವ ಅನುದಾನ ಕಡಿತದ ಬಗ್ಗೆ ಅವರು ಬಹಿರಂಗವಾಗಿ ಪ್ರಶ್ನೆ ಮಾಡಬೇಕು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಕುಳಿತು ಚರ್ಚಿಸಿ ರಾಜ್ಯದ ಅನುದಾನವನ್ನು ಕೇಳಿ ತರಬೇಕಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯದ ಸಂಸದರಿಂದ ಹಿಡಿದು ಮುಖ್ಯಮಂತ್ರಿಗಳವರೆಗೂ ಯಾರೊಬ್ಬರೂ ಕೇಂದ್ರದ ನಾಯಕರ ಮುಂದೆ ರಾಜ್ಯದ ಪರ ಚಕಾರ ಕೂಡ ಎತ್ತಲ್ಲ,

ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದ ಮುಂದೆ ಪ್ರಸ್ತಾಪಿಸುತ್ತಲು ತಾಕತ್ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *