ರಾಜ್ಯ

ಶೆಟ್ಟರ್ ಸಿಎಂ ಮಾಡಲು ಕಾಂಗ್ರೆಸ್ ಟೀಂ ಪ್ಲಾನ್ ಮಾಡ್ತಿದೆ ಎಂದ ಜಾರಕಿಹೊಳಿ

ಬೆಳಗಾವಿ prajakiran.com : ಬಿಜೆಪಿಯಲ್ಲಿ ಸಿಎಂ ಬದಲಾವಣೆ ರಾಜಕೀಯ ನಡೆಯುತ್ತಿದೆ. ಇದನ್ನು ಬಿಜೆಪಿ ಹೈಕಮಾಂಡ ಯಡಿಯೂರಪ್ಪ ಮೇಲೆಯೇ ಬಿಡ್ತಾರಾ ನೋಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಬಿಜೆಪಿ ಪಾಳ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜ್ಯೋಶಿ ಇಲ್ಲವೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನ ಸಿಎಂ ಮಾಡುವ ಚರ್ಚೆ ನಡೆದಿದೆ. ಬಿಜೆಪಿಗೆ ಹೋದ ನಮ್ಮ ಕಾಂಗ್ರೆಸ್ ಟೀಂ ಜಗದೀಶ್ ಶೆಟ್ಟರ್ ಪರವಾಗಿದೆ ಎಂದು ಹೊಸ ಬಾಂಬ್ ಸಿಡಿಸಿದರು.

ಬಿಜೆಪಿಗೆ ಹೋದ ನಮ್ಮವರೇ ೧,೨,೩ ಟಾಪ್ ನಲ್ಲಿ ಇದ್ದಾರೆ. ಇದು ಮೂಲ ಬಿಜೆಪಿ ಶಾಸಕರಿಗೆ ಸಂಕಟ ತಂದಿದೆ. ಅದರಿಂದಾಗಿ ಅಲ್ಲಿ ಸಮಸ್ಯೆ ಆರಂಭವಾಗಿದೆ.  ಇದು ಯಾವಾಗ ಸ್ಫೋಟ ಆಗೋತ್ತೋ ಗೊತ್ತಿಲ್ಲ ಎಂದು ಛೇಡಿಸಿದರು.

ಶೆಟ್ಟರ್ ಸಿಎಂ ಮಾಡಲು ನಮ್ಮ ಕಾಂಗ್ರೆಸ್ ಟೀಂ ಪ್ಲಾನ್ ಮಾಡ್ತಿದೆ. ಬಿಜೆಪಿಗೆ ಹೋದವರು ಕಾಂಗ್ರೆಸ್ ಟೀಂ, ಇವರು ತಮ್ಮ ಲಾಭಕ್ಕಾಗಿ ಹೋಗಿದ್ದಾರೆ. ಇವರಿಗೆ ಪಕ್ಷದ ಸಿದ್ಧಾಂತ ಪ್ರಶ್ನೆ ಬರುವುದಿಲ್ಲ ಎಂದರು.

ಕಾಂಗ್ರೆಸ್ ಟೀಂ ಲೆಕ್ಕದಲ್ಲಿ ಮುಂದಿನ ಸಿಎಂ ಜಗದೀಶ್ ಶೆಟ್ಟರ್ ಎಂಬ ಮಾತುಗಳು ಕೇಳಿಬರುತ್ತಿವೆ ಎಂದರು.

ಸಚಿವ ರಮೇಶ ಜಾರಕಿಹೊಳಿ ಇನ್ನೂ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ ಹೊಸದಾಗಿ ರಾಜೀನಾಮೆ ಕೊಟ್ಟರೆ ಅವರಿಗೆ ಎಲ್ಲಿಂದ ಮಂತ್ರಿ ಮಾಡ್ತಾರೆ.

ಮಂತ್ರಿ ಆಗ್ತಿದ್ದರೆ ಓಕೆ,  ಎಂಎಲ.ಎ ಆಗಿ ಇರಬೇಕೆಂದ್ರೆ ಕಾಂಗ್ರೆಸ್ ನಲ್ಲಿ ಓಕೆ. ಈಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಖಾಲಿಯಿಲ್ಲ ಎಂದರು.

ರಮೇಶ ಜಾರಕಿಹೊಳಿ ಹೇಳಿಕೆಗೆ ಹೈಕಮಾಂಡ ಒಪ್ಪುವುದೆ. ರಮೇಶ ಜಾರಕಿಹೊಳಿ ಅಲ್ಲಿ. ಇಲ್ಲಿ ಶಾಸಕರನ್ನ ಕರೆದುಕೊಂಡು ಬರ್ತಿವಿ ಅನ್ನೋದು ಬಂಡವಾಳವಾಗಿದೆ. ಆದ್ರೆ ಯಾವ ಶಾಸಕರು ಕಾಂಗ್ರೆಸ ಪಕ್ಷ ಬಿಟ್ಟು ಹೋಗಲ್ಲ ಎಂದರು.

ನಾವು ಹೋದ್ರೆ ಚುನಾವಣೆಗೆ ಹೋಗ್ತಿವಿ ಹೊರತು ಯಾವ  ಬಿಜೆಪಿ ಶಾಸಕರನ್ನ ಸೆಳೆಯುತ್ತಿಲ್ಲ. ಬಿಜೆಪಿ ಶಾಸಕರನ್ನ ಸೆಳೆಯುವ ಪ್ರಶ್ನೆಯೇ ಇಲ್ಲ.

ಆಪರೇಷನ್ ಮಾಡುವಷ್ಟು ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಬಳಿ ಇಲ್ಲ. ಏನೆ ಪರಿಸ್ಥಿತಿ ಬಂದ್ರೆ ಚುನಾವಣೆ ಒಂದೇ ಪರಿಹಾರ ಎಂದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *