ಧಾರವಾಡ ಪ್ರಜಾಕಿರಣ ಕಾಮ್ : ಕುಡಿದ ಮತ್ತಿನಲ್ಲಿದ್ದ ನಟೋರಿಯಸ್ ಕಳ್ಳನೊಬ್ಬ ಧಾರವಾಡದ ಆಲೂರು ವೆಂಕಟರಾವ್ ವೃತ್ತದ ಬಳಿಯ ಮೊಬೈಲ್ ಟವರ್ ಏರಿ, ಕುಳಿತು ಹಲವು ಗಂಟೆಗಳ ಕಾಲ ಹೈಡ್ರಾಮ್ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ನಾಲ್ಕು ಗಂಟೆಗಳ ಕಾರ್ಯಾಚರಣೆ ಹಾಗೂ ಹರಸಾಹಸದ ನಂತರ ಆತನನ್ನ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಲಾಗಿದೆ.
ಧಾರವಾಡದ ಜಾವೇದ್ ಡಲಾಯಿತ್ ಎಂಬಾತನೇ ಟವರ್ ಏರಿದ್ದ ಕಳ್ಳಾಗಿದ್ದ.
ಒಂದು ಕಾಲದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ಜೈಲು ಪಾಲಾಗಿದ್ದ.ಆನಂತರ ಕುಡಿತದ ಚಟಕ್ಕೆ ಬಿದ್ದಿದ್ದ.
ಇತನ ಮಡದಿ ಬೆಳಗಾವಿಗೆ ಕರೆದುಕೊಂಡು ಹೋಗಿ ತರಕಾರಿ ವ್ಯಾಪಾರ ಮಾಡಲು ಹಚ್ಚಿದ್ದಳು.
ಆದರೆ, ನಟೋರಿಯಸ್ ಜಾವೇದ್ ಕುಡಿತದ ಅಮಲಿಗೆ ಸಿಕ್ಕು ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಿದ್ದ. ಇದರಿಂದಾಗಿ ಕೆಲ ಕಾಲ ಪೊಲೀಸರು ಕೂಡ ಹೈರಾಣರಾಗಿದ್ದರು.
ಸಿಗರೆಟ್, ಬಿರಿಯಾನಿ ಬೇಡಿಕೆ ಇಟ್ಟಿದ್ದ ಭೂಪ, ನ್ಯಾಯಾಧೀಶರ ಭೇಟಿಗೆ ಪಟ್ಟು ಹಿಡಿದಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಕೆಳಗೆ ಇಳಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು.