ರಾಜ್ಯ

ಧಾರವಾಡ : ಕುಡಿದ ಮತ್ತಿನಲ್ಲಿದ್ದ ನಟೋರಿಯಸ್ ಕಳ್ಳ ಜಾವೇದ್ ಟವರ್ ಏರಿ, ಹೈಡ್ರಾಮ್

ಧಾರವಾಡ ಪ್ರಜಾಕಿರಣ ಕಾಮ್ : ಕುಡಿದ ಮತ್ತಿನಲ್ಲಿದ್ದ ನಟೋರಿಯಸ್ ಕಳ್ಳನೊಬ್ಬ ಧಾರವಾಡದ ಆಲೂರು ವೆಂಕಟರಾವ್ ವೃತ್ತದ ಬಳಿಯ ಮೊಬೈಲ್ ಟವರ್ ಏರಿ, ಕುಳಿತು ಹಲವು ಗಂಟೆಗಳ ಕಾಲ ಹೈಡ್ರಾಮ್ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ನಾಲ್ಕು ಗಂಟೆಗಳ ಕಾರ್ಯಾಚರಣೆ ಹಾಗೂ ಹರಸಾಹಸದ ನಂತರ ಆತನನ್ನ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಲಾಗಿದೆ.

ಧಾರವಾಡದ ಜಾವೇದ್ ಡಲಾಯಿತ್ ಎಂಬಾತನೇ ಟವರ್ ಏರಿದ್ದ ಕಳ್ಳಾಗಿದ್ದ.

ಒಂದು ಕಾಲದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ಜೈಲು ಪಾಲಾಗಿದ್ದ.ಆನಂತರ ಕುಡಿತದ ಚಟಕ್ಕೆ ಬಿದ್ದಿದ್ದ.

ಇತನ ಮಡದಿ ಬೆಳಗಾವಿಗೆ ಕರೆದುಕೊಂಡು ಹೋಗಿ ತರಕಾರಿ ವ್ಯಾಪಾರ ಮಾಡಲು ಹಚ್ಚಿದ್ದಳು.

ಆದರೆ, ನಟೋರಿಯಸ್ ಜಾವೇದ್ ಕುಡಿತದ ಅಮಲಿಗೆ ಸಿಕ್ಕು ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಿದ್ದ. ಇದರಿಂದಾಗಿ ಕೆಲ ಕಾಲ ಪೊಲೀಸರು ಕೂಡ ಹೈರಾಣರಾಗಿದ್ದರು.

ಸಿಗರೆಟ್, ಬಿರಿಯಾನಿ ಬೇಡಿಕೆ ಇಟ್ಟಿದ್ದ ಭೂಪ, ನ್ಯಾಯಾಧೀಶರ ಭೇಟಿಗೆ ಪಟ್ಟು ಹಿಡಿದಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಕೆಳಗೆ ಇಳಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *