ಧಾರವಾಡ Prajakiran.com : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಪೊಲೀಸರೇ ಸತ್ಯಾಂಶವನ್ನು ಹೊರತಂದು ನಾಂದಿ ಹಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಧಾರವಾಡದಲ್ಲಿ ಹೇಳಿದರು.
ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ತಿರುವು ಪಡೆದುಕೊಂಡರೆ ಅಂತಿಮವಾಗಿ ಅದಕ್ಕೆ ಪೊಲೀಸರೇ ನಾಂದಿ ಹಾಡಬೇಕಿದೆ.
ನಿನ್ನೆಯಷ್ಟೇ ರಮೇಶ್ ಅವರು ದೂರು ದಾಖಲಿಸಿದ್ದಾರೆ. ಇನ್ನೂ 90 ದಿನಗಳ ಕಾಲಾವಕಾಶ ಇರುತ್ತದೆ.
ಎಲ್ಲವನ್ನೂ ತನಿಖೆ ಮಾಡಬೇಕು. ವೀಡಿಯೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬರೋದಿಲ್ಲ.
ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಈ ವೀಡಿಯೋ ಸತ್ಯಾಂಶ ಬಯಲಾಗಲಿ.
ನಾನು ಹೇಳಿದರೆ ನನ್ನ ಪರ ಬೇರೆಯವರು ಹೇಳಿದರೆ ಬೇರೆಯವರ ಪರ ಹೇಳಿಕೆ ನೀಡಲಾಗುತ್ತಿದೆ.
ಇದಕ್ಕೆ ಪೊಲೀಸರೇ ಉತ್ತರ ಕಂಡುಕೊಂಡು ಸತ್ಯಾಂಶ ಬಯಲು ಮಾಡಬೇಕಿದೆ ಎಂದು ತಿಳಿಸಿದರು.
ರಮೇಶ್ ಅವರು ಯಾವ ರೀತಿ ದೂರು ದಾಖಲಿಸಿದ್ದಾರೋ ಏನೋ ಗೊತ್ತಿಲ್ಲ.
ಅದು ಅವರಿಗೆ ಬಿಟ್ಟ ವಿಚಾರ. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಕರೆದು ಪೊಲೀಸರು ವಿಚಾರಣೆ ನಡೆಸಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.