ರಾಜ್ಯ

ರಾಸಲೀಲೆ ಸಿಡಿ ಪ್ರಕರಣ : ಪೊಲೀಸರೇ ನಾಂದಿ ಹಾಡಬೇಕಿದೆ ಎಂದ ಸತೀಶ್ ಜಾರಕಿಹೊಳಿ

ಧಾರವಾಡ Prajakiran.com : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಪೊಲೀಸರೇ ಸತ್ಯಾಂಶವನ್ನು ಹೊರತಂದು ನಾಂದಿ ಹಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಧಾರವಾಡದಲ್ಲಿ ಹೇಳಿದರು.

ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ತಿರುವು ಪಡೆದುಕೊಂಡರೆ ಅಂತಿಮವಾಗಿ ಅದಕ್ಕೆ ಪೊಲೀಸರೇ ನಾಂದಿ ಹಾಡಬೇಕಿದೆ.

ನಿನ್ನೆಯಷ್ಟೇ ರಮೇಶ್ ಅವರು ದೂರು ದಾಖಲಿಸಿದ್ದಾರೆ. ಇನ್ನೂ 90 ದಿನಗಳ ಕಾಲಾವಕಾಶ ಇರುತ್ತದೆ.

ಎಲ್ಲವನ್ನೂ ತನಿಖೆ ಮಾಡಬೇಕು. ವೀಡಿಯೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬರೋದಿಲ್ಲ.

ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಈ ವೀಡಿಯೋ ಸತ್ಯಾಂಶ ಬಯಲಾಗಲಿ.

ನಾನು ಹೇಳಿದರೆ ನನ್ನ ಪರ ಬೇರೆಯವರು ಹೇಳಿದರೆ ಬೇರೆಯವರ ಪರ ಹೇಳಿಕೆ ನೀಡಲಾಗುತ್ತಿದೆ.

ಇದಕ್ಕೆ ಪೊಲೀಸರೇ ಉತ್ತರ ಕಂಡುಕೊಂಡು ಸತ್ಯಾಂಶ ಬಯಲು ಮಾಡಬೇಕಿದೆ ಎಂದು ತಿಳಿಸಿದರು.

ರಮೇಶ್ ಅವರು ಯಾವ ರೀತಿ ದೂರು ದಾಖಲಿಸಿದ್ದಾರೋ ಏನೋ ಗೊತ್ತಿಲ್ಲ.

ಅದು ಅವರಿಗೆ ಬಿಟ್ಟ ವಿಚಾರ. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಕರೆದು ಪೊಲೀಸರು ವಿಚಾರಣೆ ನಡೆಸಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *