ಅಂತಾರಾಷ್ಟ್ರೀಯ

ಧಾರವಾಡದಲ್ಲೂ ಅರಳಿದ ರಾಮಲಲ್ಲಾ ….!

ಜನಜಾಗೃತಿ ಸಂಘದಿಂದ ಅರ್ಥಪೂರ್ಣ ಆಚರಣೆ

ಕಣ್ಮನ ಸೆಳೆದ
ರಾಮಮಂದಿರ
ಮರಳಿನ ಕಲಾಕೃತಿ

ರಾಮ ಭಜನೆ, ದೀಪೋತ್ಸವ ಸಂಭ್ರಮ

ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿಯ ಸಂಪಿಗೆ ನಗರದ ಬೇಂದ್ರೆ ನಗರ ಕ್ರಾಸ್ ಮೈದಾನದಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ರಾಮೋತ್ಸವ ನಡೆಯಿತು.

ಮರಳಲ್ಲಿ ರಾಮಲಲ್ಲಾ ಹಾಗೂ ರಾಮಮಂದಿರದ ಪ್ರತಿಕೃತಿಯನ್ನ ಮರಳಿನಲ್ಲಿ ರಚಿಸಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಯಿತು.

ಹಿರಿಯ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಮಕ್ಕಳಾದ ವಿನಾಯಕ, ಕಾಂತೇಶ ಅವರ ಕೈ ಚಳಕದಲ್ಲಿ ಈ ಕಲಾಕೃತಿ
ಮರಳಿನಲ್ಲಿಯೇ ಅತ್ಯಂತ ಸುಂದರವಾಗಿ ಮೂಡಿ ಬಂತು.

ಬೆಳಗ್ಗೆ ಆರು ಗಂಟೆಗೆ ಆರಂಭವಾದ ಈ ಕಲಾ ಸೇವೆ ಬೆಳಗ್ಗೆ 11.30ರ ಸುಮಾರಿಗೆ ಮುಕ್ತಾಯವಾಯಿತು.

ಪೂಜಾ ಕಾರ್ಯಕ್ರಮಕ್ಕೆ ಉಪ್ಪಿನಬೆಟಗೇರಿಯ ಮೂರು ಸಾವಿರ ಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಚಾಲನೆ ನೀಡಿದರು.

ಈ ವೇಳೆ ಆರ್ಶೀವಚನ ನೀಡಿದ ಶ್ರೀಗಳು, ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಅದ್ಬುತ ಮಂದಿರ ನಿರ್ಮಾಣದ ಕನಸು ಐದು ಶತಮಾನದ ಬಳಿಕ ಸಾಕಾರಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಧ್ಯೈರ್ಯ, ಸ್ಥೈರ್ಯ ಹಾಗೂ ಸಂಕಲ್ಪದ ಫಲವಾಗಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡಿದೆ.ಹೀಗಾಗಿ ಇಂದು ದೇಶದೆಲ್ಲೆಡೆ,ಸಂಭ್ರಮ ಮನೆ ಮಾಡಿದೆ‌.ಆದರ್ಶ ಪುರುಷ ಶ್ರೀರಾಮಚಂದ್ರನ‌ ಆಡಳಿತಾವಧಿಯ ರಾಮರಾಜ್ಯದ ಕನಸು ನನಸಾಗುವತ್ತ ಎಲ್ಲರೂ ದೃಢ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಸಂಘವು ಕಳೆದ ಹಲವಾರು ವರ್ಷಗಳಿಂದ ಸ್ವಾಮಿ ವಿವೇಕಾನಂದ, ರಾಮಜನ್ಮ ಭೂಮಿಯ ಮರಳಿನ ಕಲಾಕೃತಿ ರಚಿಸಿ ಪೂಜಿಸುವ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದೇವೆ.

ಇಂದು ರಾಮಲಲ್ಲಾ ಹಾಗೂ ರಾಮಮಂದಿರ ಮರಳಿನಲ್ಲಿ ಮೂಡಿ ಬರುವ ಮೂಲಕ ಜನಮಾನಸದಲ್ಲಿ ಅಷ್ಟೇ ರಾಮಜಪ ಅಲ್ಲ. ನಮ್ಮ ಮರಳಿನ ಕಣಕಣದಲ್ಲಿ ರಾಮ ಇದ್ದಾನೆ ಎಂಬುದು ತೋರಿಸಿದಂತಾಗಿದೆ.

ನಮ್ಮ ಆಚಾರ, ವಿಚಾರ, ಸಂಸ್ಕಾರ ಹಾಗೂ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ‌ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಇಂದು ಇಡೀ ಜಗತ್ತು ರಾಮಲಲ್ಲಾನತ್ತ ನಿಬ್ಬೆರಾಗಿ ನೋಡುವಂತಾಗಿದೆ ಎಂದರು.
ಈ ವೇಳೆ ಜನಜಾಗೃತಿ ಸಂಘದಿಂದ ಉಪ್ಪಿನಬೆಟಗೇರಿಯ ಮೂರು ಸಾವಿರ ಮಠದ ಶ್ರೀ‌ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹಾಗೂ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಮಕ್ಕಳಾದ ವಿನಾಯಕ ಹಾಗೂ ಕಾಂತೇಶ ಅವರಿಗೆ ಭಕ್ತಿಪೂರ್ವಕ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸುಮಂಗಲಾ ಕೊರವರ, ಬಸವಣ್ಣೆಪ್ಪಾ ಕಮತಿ,
ಶಿವಾಜಿ ಪವಾರ, ಶಂಕರ ಬಸವರೆಡ್ಡಿ, ರಾಜು ಪಾಟೀಲ್, ಎಸ್.ಆರ್. ಸಣ್ಣಕ್ಕಿ, ಎಂ.ಡಿ. ಪಾಟೀಲ,
ಆನಂದ ಪಾಟೀಲ, ಮಲ್ಲೇಶ ಅಂಬಿಗೇರ, ಈರಣ್ಣ ಭಂಡಾರಿಮಠ, ಸುಶೀಲಾ ಕಾಂಬಳೆ, ತುಕಾರಾಮ ಮಾಣಿಕನವರ ಸೇರಿದಂತೆ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *