ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ಆಡಳಿತ ರೂಢ ಬಿಜೆಪಿ ಸರಕಾರದ ಮೇಲೆ ಮುಗಿ ಬಿದ್ದ ಬೆನ್ನಲ್ಲೇ ಯುವತಿಗೆ ಎಸ್ ಐ ಟಿ ಐದನೇ ನೋಟಿಸ್ ಜಾರಿ ಮಾಡಿದೆ.
ಈ ಹಿಂದೆ ಅವರ ಅಜ್ಜಿ ಮನೆಗೆ ನೋಟಿಸ್ ಅಂಟಿಸಲಾಗಿತ್ತು. ಆದರೂ ಯುವತಿ ವೀಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದಳು ಹೊರತು ಎಸ್ ಐ ಟಿ ಮುಂದೆ ತನಿಗೆ ಹಾಜರಾಗಿರಲಿಲ್ಲ.
ಎಸ್ ಐಟಿ ಅಧಿಕಾರಿಗಳು ಹಲವು ತಂಡಗಳಾಗಿ ಪತ್ತೆ ನಡೆಸುತ್ತಿದ್ದರೂ ಈವರೆಗೆ ಯಾವುದೇ ಸುಳಿವು ದೊರೆತಿಲ್ಲ.
ಬದಲಾಗಿ ಗೋವಾ, ದೆಹಲಿ ಸೇರಿದಂತೆ ಮತ್ತಿತರ ಕಡೆ ಮೊಬೈಲ್ ಆನ್ ಆಫ್ ಆಗಿರುವುದು ಗೊತ್ತಾಗಿದೆ.
ಈ ನಡುವೆ ಅವರ ಕುಟುಂಬದ ಸದಸ್ಯರ ವಿಚಾರಣೆ ನಡೆಸಿ ಮಹತ್ತರ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ದಿನದಿಂದ ದಿನಕ್ಕೆ ಹೊದ ಸ್ವರೂಪ ಪಡೆಯುತ್ತಿದ್ದು, ಎಸ್ ಐ ಟಿ ಹಾಗೂ ಸರಕಾರಕ್ಕೆ ಮುಜುಗರವುಂಟು ಮಾಡುತ್ತಿದೆ.
ಇತ್ತ ಸದನದಲ್ಲಿ ಕಾಂಗ್ರೆಸ್ ಸಿಡಿ ಪ್ರದರ್ಶನ ಮಾಡಿ ಸಿಡಿ ಸರಕಾರ ಎಂದು ಛೇಡಿಸಲು ಸಜ್ಜುಗೊಂಡಿದೆ.