ಬೆಂಗಳೂರು prajakiran.com : ಮಂಗಳವಾರ ಆರಂಭಗೊಂಡ ವಿಧಾನ ಸಭೆಯ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕರು ಸದನದ ಬಾವಿಗಿಳಿದು, ಪ್ರತಿಭಟನೆ ನಡೆಸಿದರು.
ಅದರಲ್ಲೂ ವಿಶೇಷವಾಗಿ ಸದನಕ್ಕೆ ಸಿಡಿ ಹಿಡಿದು ಕೊಂಡು ಬಂದು ಅವುಗಳ ಪ್ರದರ್ಶನ ಮಾಡಿ ಇದು ಸಿಡಿ ಸರಕಾರ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ರೂಢ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದ ಕಾಂಗ್ರೆಸ್ ಶಾಸಕರಿಗೆ ಮನವೊಲಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನ ವಾಗಲಿಲ್ಲ.
ಆಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕರೆದರು. ಅವರು ಅಸಹಾಯಕತೆ ತೋರಿದಾಗ ನಿಮ್ಮದು ಏನರಿ ಕಥ ಎಂದು ಮತ್ತೆ ಕೇಳಿದಾಗ ಎದ್ದು ನಿಂತ ಗೃಹ ಸಚಿವರು ಪ್ರಶ್ನೋತ್ತರ ಕಲಾಪ ಆರಂಭಿಸುವಂತೆ ಕೋರಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಸಿಡಿ ತಯಾರಿಸುವ ಕಾಂಗ್ರೆಸ್ ಫ್ಯಾಕ್ಟರಿ ಎಂದು ಕುಟುಕಿದರು.
ಇದರಿಂದಾಗಿ ಸದನದಲ್ಲಿ ಕೆಲ ಕಾಲ ಗೊಂದಲದ ವಾತವರಣ ನಿರ್ಮಾಣ ವಾಗಿತ್ತು.
ಹೀಗಾಗಿ ಸ್ಪೀಕರ್ ಕಾಗೇರಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.