ರಾಜ್ಯ

ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಿ.ಡಿ.ಸಜ್ಜನನನ್ನು ಬಲೆಗೆ ಕೆಡುವುದರಲ್ಲಿ ಯಶಸ್ವಿಯಾದ ಸಿ ಐ ಡಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿ ಬಿ ಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಐ ಡಿ ಬಿ ಐ ಮ್ಯಾನೇಜರ್ ಹಾಗೂ ಕ್ಲರ್ಕ್ ಮತ್ತು ತಂದೆಗೆ ಗೊತ್ತಿಲ್ಲದ ಹಾಗೆಯೇ 64 ಲಕ್ಷ ಡ್ರಾ ಮಾಡಿದ್ದ ಮಗನನ್ನು ಬಂಧಿಸಿದ ಬೆನ್ನಲ್ಲೇ ಕೆ ಐ ಎ ಡಿ ಬಿ ಯ ಮ್ಯಾನೇಜರ್ ಎಂ.ಕೆ. ಸಿಂಪಿಯ ಬಂಧನದ ನಂತರ ಇದೀಗ ಸಿಐಡಿ ಅಧಿಕಾರಿಗಳ ತಂಡ ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಸಂತಕುಮಾರ ಸಜ್ಜನ ಅಲಿಯಾಸ್ ವಿ.ಡಿ.ಸಜ್ಜನನನ್ನು ಬಲೆಗೆ ಕೆಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಆ ಮೂಲಕ ಬಂಧಿತರ ಸಂಖ್ಯೆ ಈಗ ಐದಕ್ಕೆ ಏರಿಕೆಯಾಗಿದೆ.
ವಿ.ಡಿ. ಸಜ್ಜನ ಈ ಪ್ರಕರಣದ ಎ 1 ಆರೋಪಿಯಾಗಿದ್ದಾರೆ.

ಇದೀಗ ಸಿಐಡಿಯು ಐದನೇ ಆರೋಪಿಯನ್ನಾಗಿಸಿ ಬಂಧಿಸಿ ವಿ.ಡಿ. ಸಜ್ಜನರನ್ನು ಕಂಬಿಯ ಹಿಂದೆ ತಳ್ಳಿದೆ.

ಕೆ ಐ ಎ ಡಿ ಬಿಯ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮ್ಯಾನೇಜರ್ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ್ ತಳವಾರ ಹಾಗೂ ಎಜೆಂಟ್ ಅಶ್ಫಕ್ ದುಂಡಸಿಯನ್ನು ಇತ್ತೀಚೆಗೆ ಸಿಐಡಿ ಅಧಿಕಾರಿಗಳು ದಿನವೀಡಿ ಡ್ರೀಲ್ ಮಾಡಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದರು.

ಅದರ ಬೆನ್ನಲ್ಲೇ ಕೆ ಐ ಎ ಡಿ ಬಿ ವಿ.ಡಿ. ಸಜ್ಜನನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು.

ಈ ಪ್ರಕರಣದ ಸಿ ಐ ಡಿ ತನಿಖೆ ನಡೆಸಲು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಒತ್ತಾಯಿಸಿ, ಸಿಎಂ ಹಾಗೂ ಲೋಕಾಯುಕ್ತರ ಮುಂದೆ ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *