ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರ-71ರ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ.
ಬಿಜೆಪಿ ಟಿಕೇಟ್ ಘೋಷಣೆ ಮುನ್ನವೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿರುಸಿನ ಸಂಚಾರ ಕೈಗೊಂಡಿರುವ ಬಡವರ ಮಗ ಬಸವರಾಜ ಕೊರವರ ಪರ ವ್ಯಾಪಕವಾಗಿ ಒಲವು ಕಂಡು ಬರತೊಡಗಿದೆ.
ನಿನ್ನೆ ಭಾನುವಾರ ಕುರಬಗಟ್ಟಿ ಹಾಗೂ ಕೋಟೂರು ಗ್ರಾಮಸ್ಥರು ಬಡವರ ಮಗ ಬಸವರಾಜ ಕೊರವರ ಕ್ಷೇತ್ರದ ಬೆಳಕಾಗಲಿ ಎಂದು ಹರಿಸಿ ಹಾರೈಸಿ ಆರತಿ ಬೆಳಗಿ ಶುಭ ಕೋರಿದ್ದಾರೆ.
ಆ ಬಳಿಕ ಮಾತನಾಡಿದ ಬಸವರಾಜ ಕೊರವರ, ಕ್ಷೇತ್ರದ ಹತ್ತು ಹಲವು ಜ್ವಲಂತ ಸಮಸ್ಯೆಗಳು ಪರಿಹಾರವಾಗಬೇಕು.
ಕ್ಷೇತ್ರದ ಜನರು ಜನಪ್ರತಿನಿಧಿಗಳನ್ನು ಹುಡುಕಿಕೊಂಡು ಅವರ ಬಾಗಿಲಿಗೆ ಹೋಗಿ ಗಂಟೆಗಳ ಕಾಲ ಕಾಯುವುದು ತಪ್ಪಬೇಕು.
ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ ನಡೆದು ಬರುವಂತೆ ಆಗಬೇಕು ಎನ್ನುವ ಇರಾದೆ ಇದ್ದರೆ ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕು.
ಅಂದಾಗ ಜನರ ಬವಣೆಗಳಿಗೆ ಮುಕ್ತಿ ಸಿಗಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಒಕ್ಕೂರಿಲಿನಿಂದ ಪ್ರೀತಿಯಿಂದ ಸ್ವಾಗತ ಕೋರುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ನಾನು ನಿಮ್ಮ ಮನೆ ಮಗನಾಗಿ ಜನರ ಸೇವಕನಾಗಿ ದುಡಿಯಲು ಸಿದ್ದನಿದ್ದೇನೆ. ನೀವು ವ್ಯಕ್ತಿ ನೋಡಿ, ಅವರ ಗುಣ ನೋಡಿ ಮತ ನೀಡಿ ಎಂದು ಮನವಿ ಮಾಡಿದರು