ಹಾಸನ prajakiran.com : ಬಡಕೂಲಿಕಾರ್ಮಿಕರಿಂದ ಹಿಡಿದು ವೈದ್ಯಕೀಯ ಶಿಕ್ಷಣ ಸಚಿವರವರೆಗೆ ಎಲ್ಲರನ್ನು ಕಾಡಿರುವ ಮಹಾಮಾರಿ ಕರೋನಾ ವೈರಸ್ ಸೋಂಕು ಇದೀಗ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೂ ಕಾಡಲು ಆರಂಭಿಸಿದೆ.
ಹೆಚ್.ಡಿ. ರೇವಣ್ಣ ಅವರ ಎಸ್ಕಾರ್ಟ್ ನ ನಾಲ್ಚರಿಗೆ ಸೋಂಕು ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಆತಂಕ ಶುರುವಾಗಿದೆ.
ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುತ್ತಿರೋ ನಾಲ್ವರು ಪೊಲೀಸರಿಗೆ ಕರೋನಾ ಹರಡಿರುವ ಶಂಕೆ ಇದೆ.
ಬೆಂಗಳೂರಿನಲ್ಲಿರೋ ಮೂವರು, ಹಾಸನದಲ್ಲಿರೋ ಒಬ್ಬ ಸಿಬ್ಬಂದಿಗೆ ಸೋಂಕು ಶಂಕೆ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸದ್ಯಕ್ಕೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ರೇವಣ್ಣ ಅವರ ಭದ್ರತಾ ಪಡೆಯ ಪೊಲೀಸರ ಸ್ವ್ಯಾಬ್ ಸಂಗ್ರಹ ಮಾಡಲಾಗಿತ್ತು. ನಿನ್ನೆ ಸಂಜೆ ನಾಲ್ವರೂ ಪೊಲೀಸರಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ ಎನ್ನಲಾಗುತ್ತಿದೆ.
ಹೀಗಾಗಿ ತಮ್ಮ ಬೆಂಗಾವಲು ಪಡೆಯ ನಾಲ್ವರಿಗೆ ಕರೊನಾ ಶಂಕೆ ಹಿನ್ನೆಲೆಯಲ್ಲಿ ರೇವಣ್ಣಅವರಿಗೂ ಆತಂಕ ಎದುರಾಗಿದೆ.
ಇದೇ ವೇಳೆ ರೇವಣ್ಣ ಆಪ್ತ ಸಹಾಯಕರಾದ ಇಬ್ಬರ ವರದಿ ನೆಗೆಟಿವ್ ಬಂದಿರುವುದು ತುಸು ಸಮಾಧಾನ ತಂದಿದ್ದು, ಮಂಗಳವಾರ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಳ್ಳಲು ಸಜ್ಜಾಗಿದ್ದಾರೆ.
ಅವರ ವರದಿ ಪಾಸಿಟಿವ್ ಅಥವಾ ನೆಗೆಟಿವ್ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.