ದಾವಣಗೆರೆ prajakiran.com: ಸಚಿವ ಸಿ.ಪಿ.ಯೋಗೇಶ್ವರ್ ನನ್ನು
ಮೆಗಾ ಸಿಟಿ ಹಗರಣದಲ್ಲಿ ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ 65 ಶಾಸಕರು ಸಹಿ ಮಾಡಿದ್ದ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ್ದು, ಸಂಪುಟದಿಂದ ಕೈಬಿಟ್ಟು ಬಂಧಿಸಬೇಕು ಎಂದು ಒತ್ತಾಯಿಸಿದರು
ಯೋಗೇಶ್ವರಗೆ ಜಲ ಸಂಪನ್ಮೂಲ ಹಾಗೂ ಇಂಧನ ಖಾತೆ ಜೊತೆಗೆ ರಾಮನಗರ ಜಿಲ್ಲೆಯ ಉಸ್ತುವಾರಿ ಸ್ಈ ಬೇಕಾಗಿತ್ತು.
ಅದು ಸಿಕ್ಕಿಲ್ಲ ಎಂದು ಅವನಿಗೆ ತಳಮಳ ಶುರುವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ದೆಹಲಿ ನಾಯಕರ ಮನೆಯ ಮುಂದೆ ನಿಂತು ಪೋಟೋ ತೆಗೆಸಿಕೊಂಡು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾನೆ.
ಮೊದಲು ರಾಜ್ಯದಲ್ಲಿ
ಕೋವಿಡ್ ಸೋಂಕು ಇಳಿಮುಖ ಆಗಲಿ. ಆ ಬಳಿಕ ನನ್ನ ಹೋರಾಟ ಆರಂಭವಾಗಲಿದೆ ಎಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದರು