ಧಾರವಾಡ prajakiran.com : ಧಾರವಾಡ ತಾಲೂಕು ಪಂಚಾಯಿತಿ ಕೊನೆ ಅವಧಿಗೆ ಅಧ್ಯಕ್ಷರಾಗಿ ಮಾದನಬಾವಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ರವಿವರ್ಮಾ ಪಾಟೀಲ ಆಯ್ಕೆಯಾದರು.
ಮಂಗಳವಾರ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬೆಳಗ್ಗೆ ರವಿವರ್ಮಾ ಪಾಟೀಲ ಹಾಗೂ ಸುರೇಂದ್ರ ದೇಸಾಯಿ ಅವರು ಅಧ್ಯಕ್ಷ ಸ್ಥಾನ ಬಯಸಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ೨೪ ಸಂಖ್ಯಾಬಲ ಹೊಂದಿರುವ ತಾಪಂಗೆ ಅಧ್ಯಕ್ಷರ ಆಯ್ಕೆಗೆ ೧೩ ಸದಸ್ಯರ ಬೆಂಬಲ ಬೇಕಿತ್ತು.
ಆದರೆ ಇಬ್ಬರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು (ತಲಾ ೧೨ ಮತ) ಸಮಬಲ ಸಾಧಿಸಿದ್ದರಿಂದ ಚೀಟಿ ಎತ್ತುವ ಮೂಲಕ ಆಯ್ಕೆ ನಡೆಸಲಾಯಿತು. ಕೊನೆಗೂ ಅದೃಷ್ಟ ರವಿವರ್ಮಾ ಪಾಟೀಲರಿಗೆ ಖುಲಾಯಿಸಿತು.