ಶಿವಮೊಗ್ಗ prajakiran.com : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಬಸವಪುರ ಬಳಿ ರೈಲ್ವೆ ಟ್ರ್ಯಾಕ್ ಮಧ್ಯೆ ನಿನ್ನೆ ರಾತ್ರಿ ಬೆಂಗಳೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ಇಂಟರ್ಸಿಟಿ ರೈಲಿನ ಇಂಜಿನ್ ಗಾಲಿ ರೈಲ್ವೆ ಟ್ರ್ಯಾಕ್ ಬಿಟ್ಟು ಕೆಳಗೆ ಇಳಿದಿದೆ.
ಅದರಿಂದಾಗಿ ರೈಲು ಅಲ್ಲಿಯೇ ನಿಂತಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದ್ದು, ಪ್ರಯಾಣಿಕರೆಲ್ಲರು ಸುರಕ್ಷಿತರಾಗಿದ್ದಾರೆ .
ಹಳಿ ತಪ್ಪಿದ ರೈಲು ಇಂಜಿನಿನ ಮುಂದಿನ ಎರಡು ಚಕ್ರವು ಕೆಳಗೆ ಇಳಿದಿತ್ತು.
ತಕ್ಷಣ ರೈಲು ಅವಘಡ ಅರಿತು ಚಾಲಕ ಅದನ್ನು ತಡೆ ಹಿಡಿದಿದ್ದಾನೆ. ಇದರಿಂದಾಗಿ ಪ್ರಯಾಣಿಕರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಳಿಕ ಸಾಗರ, ಆನಂದಪುರ, ತಾಳಗುಪ್ಪ ಹೋಗುವ ಪ್ರಯಾಣಿಕರನ್ನು ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿ ಅವರ ಊರುಗಳಿಗೆ ಕಳುಹಿಸಿಕೊಡಲಾಗಿದೆ.