ಧಾರವಾಡ Prajakiran.com : ಹಿಂದೂತ್ವದ ಕಟ್ಟರ್ ಹೋರಾಟಗಾರ, ಪ್ರಖರ ವಾಗ್ಮಿ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಜನ್ಮದಿನದ ಅಂಗವಾಗಿ ಧಾರವಾಡದ ಲೈನ್ ಬಜಾರ ಹನುಮಂತ ದೇವರ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಪ್ರಮೋದ್ ಮುತಾಲಿಕ್ ಅವರಿಗೆ ಜೈಕಾರ ಹಾಕಿ, ಸಂಭ್ರಮಿಸಿದರು.
ಲೈನ್ ಬಜಾರ ಹನುಮಂತ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ ನೆರವೇರಿಸಿದ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿ ಅವರ ಹೋರಾಟ ಇನ್ನಷ್ಟು ಪ್ರಖರವಾಗುವ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಲು ಶ್ರಮೀಸುತ್ತೇವೆ ಎಂದು ಶ್ರೀ ರಾಮ ಸೇನೆ ಧಾರವಾಡ ಗ್ರಾಮೀಣ ಪ್ರಮುಖ ಪಾಂಡುರಂಗ ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಈಶ್ವರಗೌಡ ಪಾಟೀಲ್, ಗ್ರಾಮೀಣ ವಿದ್ಯಾರ್ಥಿ ಪ್ರಮುಖ ಮೈಲಾರ ಗುಡ್ಡಪ್ಪನವರ, ಧಾರವಾಡ ನಗರ ಪ್ರಮುಖ ವಿಶ್ವಾಸ, ಆನಂದ ಅಂಬೋರಿ, ಗೋಪಾಲ ಜಾಧವ, ತಿಪ್ಪಣ್ಣ ನಾಯ್ಕರ, ಶಿವಾಜಿ ತಳವಾರ, ರಾಕೇಶ್ , ಶ್ರೀನಿವಾಸ ಭೋವಿ ಸೇರಿದಂತೆ ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೂಜೆ ಸಲ್ಲಿಸಿದರು.