ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಹಾಲಿ ಶಾಸಕ ಅಮೃತ ದೇಸಾಯಿ ವಿರುದ್ದ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರು ಸಿಡಿದೆದ್ದಾರೆ.
ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ.
ಬಿಜೆಪಿಯ ಹಿರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತ ಸುನೀಲ್ ಗುಡಿ ಅವರು ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಬೇಸರ ಹೊರ ಹಾಕಿದ್ದಾರೆ.
ಕಳೆದ ಚುನಾವಣೆಯಲ್ಲಿ ನಿಮ್ಮ ಸಹಾಯ ಪಡೆದು, ನಿಮ್ಮನ್ನು ನಿರ್ಲಕ್ಷಿಸಿ ಮತ್ತೆ ಏಪ್ರಿಲ್ ಫೂಲ್ ಮಾಡಲು ಬರುತ್ತಿದ್ದಾರೆ ಎಚ್ಚರ!!
ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಎಂದು ಬರೆದಿದ್ದಾರೆ.
ಇದಕ್ಕೆ ಅನೇಕ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪೋಸ್ಟ್ ವೈರಲ್ ಆಗಿದ್ದು ಭಾರೀ ಚರ್ಚೆ ಹುಟ್ಟು ಹಾಕಿದೆ.
ಪವನ ದೇಶಪಾಂಡೆ ಅವರು
ಕಾರ್ಯ ಕರ್ತರಿಗೆ ಕಾನೂನಿನ ಒಂದು ರಕ್ಷಣಾ ಕವಚ ಇದ್ದರೆ ಹೇಗೆ..?
ಕೆಲಸ ಇದ್ದಾಗ ದುಡಿಸಿಕೊಂಡು, ಕೈ ಬಿಡುವ ಸಂಸ್ಕತಿ ಗೆ ಕಡಿವಾಣ ಬೇಡವೇ..? ಎಂದು ಬರೆದಿದ್ದಾರೆ.
ಇದಕ್ಕೆ ಸುನೀಲ್
ತಮ್ಮ ಮನೆ, ಕೆಲಸ ಬಿಟ್ಟು ಮನೆಯಲ್ಲಿ ಬೈಸಿಕೊಂಡು ಕೆಲಸ ಮಾಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ. ಬೆಲೆ ಇರುವುದು ಚೈಲಾ, ಚಮಚಾ, ಬಕೀಟಗಳಿಗೆ ಮಾತ್ರ ಎಂದು ಕುಟುಕಿದ್ದಾರೆ.
ವಿಶ್ವನಾಥ ಆರಾಧ್ಯಮಠ ಅವರು ಹಾಗಿದ್ದರೆ ಪಕ್ಷ ನೋಡೋಣ ಅಥವಾ ವ್ಯಕ್ತಿ ನೋಡೋಣವಾ ಎಂದು ಪ್ರತಿಕ್ರಿಯಿಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ಕಾರ್ಯಕರ್ತರು ಬೇಕು, ಪಕ್ಷ ಬೇಕು ನಂತರ ಹೊಳೆ ದಾಟಿದ ಮೇಲೆ ಅಂಬಿಗ….. ನಿಷ್ಠಾವಂತ ಕಾರ್ಯಕರ್ತರ ಪರಿಸ್ಥಿತಿ ಆಗಿದೆ.
ಇದಲ್ಲದೆ, ಪಕ್ಷದ ಸಿದ್ಧಾಂತಕ್ಕೆ ಹೊಂದುವ ವ್ಯಕ್ತಿ ನೋಡಿ ಮತ ಹಾಕಿ ಎಂದು ಬರೆದಿದ್ದಾರೆ.
ಈ ಪೋಸ್ಟ್ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋಲಾಹಲ ಸೃಷ್ಟಿಸಿದೆ. ಜೊತೆಗೆ ಹಾಲಿ ಶಾಸಕ ಅಮೃತ ದೇಸಾಯಿಗೆ ಪರೋಕ್ಷವಾಗಿ ಮುಜುಗರ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು.