ರಾಜ್ಯ

ಧಾರವಾಡದ ಅಮ್ಮಿನಬಾವಿಯಲ್ಲಿ ಅಭಿನವ ಶಾಂತಲಿಂಗ ಶ್ರೀಗಳ ಇಷ್ಟಲಿಂಗ ಮಹಾಪೂಜೆ ಆರಂಭ

ಧಾರವಾಡ prajakiran. com : ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಶುಕ್ರವಾರ ಪ್ರಾತಃಕಾಲ ಆರಂಭಗೊಂಡಿತು.

ಸಮಸ್ತ ಮನುಕುಲದ ಒಳಿತಿಗಾಗಿ ಮಹಾಸಂಕಲ್ಪ ಪೂಜೆಯನ್ನು ನೆರವೇರಿಸಿದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯರು ಇಷ್ಟಲಿಂಗಕ್ಕೆ ಪಂಚಾಮೃತವೂ ಸೇರಿದಂತೆ ಗಂಧೋದಕ, ಪುಷ್ಪೋದಕ, ಮಂತ್ರೋದಕಗಳಿಂದ ಮಜ್ಜನಗೈದರು. ನಿರಂತರ ರುದ್ರಪಠಣದ ಮಧ್ಯೆ ಏಕಾದಶ ರುದ್ರಾಭಿಷೇಕ ಮಹಾಪೂಜೆಯನ್ನೂ ಅವರು ನೆರವೇರಿಸಿದರು.

ನೂರೆಂಟು ಶಿವನಾಮ ಸ್ಮರಣೆಯೊಂದಿಗೆ ಬಿಲ್ವದಳ ಹಾಗೂ ವಿವಿಧ ಪುಷ್ಪಗಳೊಂದಿಗೆ ವಿಶೇಷ ಅಲಂಕಾರ ಪೂಜೆಗೈದ ಶ್ರೀಗಳು, ಮಹಾಮಂಗಳಾರತಿಯ ನಂತರ ಧ್ಯಾನದ ಅನುಸಂಧಾನದಲ್ಲಿ ಇಷ್ಟಲಿಂಗಕ್ಕೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿದರು.

ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಇದ್ದರು. ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹಕ್ಕೆ ನಂತರ ದಾಸೋಹ ಸೇವೆಯಲ್ಲಿ ಪ್ರಸಾದ ವಿತರಣೆ ಜರುಗಿತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *