ಧಾರವಾಡ prajakiran. com : ನಗರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಅದರಂತೆ ವಾರಿಯರ್ಸ್ ಆಗಿ ಪೋಲೀಸರು ಕಟ್ಟುನಿಟ್ಟಿನ ಬಿಗಿ ಭದ್ರತೆ ಒದಗಿಸಲಾಗಿದೆ.
ಅದರ ನಡುವೆ ನಗರದ ಕೋರ್ಟ್ ಸರ್ಕಲ್ ಬಳಿ ಸಂಚಾರಿ ಪೊಲೀಸರು ಗಿಡ ನೆಡುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.
ನಗರದಾದ್ಯಂತ ವಾಯು ಮಾಲಿನ್ಯದಿಂದ ಹಲವಾರು ರೋಗಗಳು ಬರುತ್ತಿವೆ.
ಪರಿಶುದ್ಧ ವಾತಾವರಣ ಇಲ್ಲದೇ ಎಲ್ಲ ಕಡೆಗೂ ಗಿಡಗಳು ನಾಶವಾಗಿವೆ.
ಈ ಸಂದರ್ಭದಲ್ಲಿ ಪೋಲಿಸರು ಗಿಡ ನೆಡುವ ಮೂಲಕ ಪರಿಸರ ಪ್ರೇಮಿಯಾಗಿ ಪರಿಸರದ ಬಗ್ಗೆ ಕಾಳಜಿ ಮೆರೆದಿದ್ದಾರೆ. ಜನರು ಸಹ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ ಠಾಣೆ ಎ ಎಸ್ ಐ ಕರಿಗಣ್ಣವರ ಮನಕವಾಡ, ಎಚ್ ಸಿ ಬಸವರಾಜ ಲಮಾಣಿ ಹಾಗೂ ಪಿ ಸಿ ಸೌದಾಗರ್ ಸಂಚಾರಿ ಪೊಲೀಸ ಸಿಬ್ಬಂದಿಗಳು ಹಾಜರಿದ್ದು ನೀರು ಹಾಕಿ ಗಿಡಗಳ ಆರೈಕೆ ಮಾಡಿದ್ದಾರೆ.