ರಾಜ್ಯ

ಲಾಕ್ ಡೌನ್ ಕರ್ತವ್ಯದ ನಡುವೆಯೂ ಪರಿಸರ ಕಾಳಜಿ ಮೆರೆದ ಧಾರವಾಡ ಸಂಚಾರಿ ಪೊಲೀಸರು

ಧಾರವಾಡ prajakiran. com : ನಗರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಅದರಂತೆ ವಾರಿಯರ್ಸ್ ಆಗಿ ಪೋಲೀಸರು ಕಟ್ಟುನಿಟ್ಟಿನ ಬಿಗಿ ಭದ್ರತೆ ಒದಗಿಸಲಾಗಿದೆ.

ಅದರ ನಡುವೆ ನಗರದ ಕೋರ್ಟ್ ಸರ್ಕಲ್ ಬಳಿ ಸಂಚಾರಿ ಪೊಲೀಸರು ಗಿಡ ನೆಡುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.

ನಗರದಾದ್ಯಂತ ವಾಯು ಮಾಲಿನ್ಯದಿಂದ ಹಲವಾರು ರೋಗಗಳು ಬರುತ್ತಿವೆ.

ಪರಿಶುದ್ಧ ವಾತಾವರಣ ಇಲ್ಲದೇ ಎಲ್ಲ ಕಡೆಗೂ ಗಿಡಗಳು ನಾಶವಾಗಿವೆ.

ಈ ಸಂದರ್ಭದಲ್ಲಿ ಪೋಲಿಸರು ಗಿಡ ನೆಡುವ ಮೂಲಕ ಪರಿಸರ ಪ್ರೇಮಿಯಾಗಿ ಪರಿಸರದ ಬಗ್ಗೆ ಕಾಳಜಿ ಮೆರೆದಿದ್ದಾರೆ. ಜನರು ಸಹ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ ಠಾಣೆ ಎ ಎಸ್ ಐ ಕರಿಗಣ್ಣವರ ಮನಕವಾಡ, ಎಚ್ ಸಿ ಬಸವರಾಜ ಲಮಾಣಿ ಹಾಗೂ ಪಿ ಸಿ ಸೌದಾಗರ್ ಸಂಚಾರಿ ಪೊಲೀಸ ಸಿಬ್ಬಂದಿಗಳು ಹಾಜರಿದ್ದು ನೀರು ಹಾಕಿ ಗಿಡಗಳ ಆರೈಕೆ ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *