ಧಾರವಾಡ prajakiran.com : ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದವರನ್ನು ಅಲಕ್ಷಿಸಿರುವುದು ಸರಿಯಲ್ಲ ಎಂದು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕರ್ನಾಟಕದ ಎಂಟು ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಆಹ್ವಾನಿಸಲಾದ ಎಂಟು ಮಂದಿ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ನಮ್ಮ ಉತ್ತರ ಕರ್ನಾಟಕದಿಂದ ಯಾರೊಬ್ಬರನ್ನೂ ಆಹ್ವಾನಿಸದಿರುವುದು ವಿಷಾದದ ಸಂಗತಿ,
ಶ್ರೀ ರಾಮಜನ್ಮಭೂಮಿ ಹೊರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ನೂರಾರು ಪ್ರಮುಖರು ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟಿ, ಗದಗ, ಕೊಪ್ಪಳ, ರಾಯಚೂರು, ಬೀದರ್, ಗುಲ್ಬರ್ಗ, ಬಳ್ಳಾರಿ, ಹಾವೇರಿ, ಕಾರವಾರ ಜಿಲ್ಲೆಯವರಿದ್ದಾರೆ.
ಇವರಲ್ಲಿ ಉತ್ತರ ಕರ್ನಾಟಕದ ಸ್ವಾಮೀಜಿ, ಮಾಜಿ ಸಂಸದರಾದ ಪ್ರಭಾಕರ ಕೋರೆ, ಬಸವವರಾಜ ಪಾಟೀಲ ಸೇಡಂ, ಮಾಜಿ ಶಾಸಕ ಪಿ.ಎಚ್. ಪೂಜಾರ, ಮುಖಂಡ ರಾಜೇಂದ್ರ ಗೋಖಲೆಯವರನ್ನು ಆಹ್ವಾನಿಸಿಲ್ಲ.
ರಾಮಜನ್ಮ ಭೂಮಿ ಟ್ರಸ್ಟ್ ನವರಿಗಾಗಲಿ ಅಥವಾ ನರೇಂದ್ರ ಮೋದಿ ಅವರ ಸಹಪಾಠಿಗಳಿಗೂ ಯಾರಿಗೂ ಗೊತ್ತಿಲ್ಲವೋ ಅಥವಾ ಉದ್ದೇಶಪೂರ್ವವಾಗಿ ಆಲಕ್ಷಿಸಲಾಗಿದೆಯೋ ಎಂದಿದ್ದಾರೆ.