ಧಾರವಾಡ prajakiran.com : ರಾಜ್ಯಾದ್ಯಂತ ಜೂನ್ ೮ ರಿಂದ ಶಾಲೆಗಳು ಆರಂಭವಾಗುತ್ತಿವೆ. ಅದಕ್ಕಾಗಿ ನಾವೆಲ್ಲರೂ ಸನ್ನದ್ಧರಾಗಿದ್ದೇವೆ.
ಆದರೆ ಕೋವಿಡ-೧೯ ವೈರಸ್ ನ ದುಷ್ಪರಿಣಾಮ ಗಂಭೀರವಾಗುತ್ತಿದ್ದು, ದಿನೇ ದಿನಕ್ಕೆ ಜ್ವಲಂತ ಸಮಸ್ಯೆಯಾಗಿ ನಮ್ಮ ಸುತ್ತ ಮುತ್ತಲೂ ಕಾಡುತ್ತಿದೆ.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಎಲ್ಲ ಶಿಕ್ಷಕರು ದುಸ್ಸಾಹಸ ವೆಂಬಂತೆ ಶಾಲೆಯನ್ನು ನಡೆಸಲು ಸಜ್ಜಾಗಿದ್ದೇವೆ .
ಹೀಗಾಗಿ ಈ ಎರಡು ವರ್ಷಗಳ ಅವಧಿಯನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಶಿಕ್ಷಕಿಯರ ಮಾತೃತ್ವ ರಜೆ ಯನ್ನು ಮಾನವೀಯ ಆಧಾರದ ಮೇಲೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಮತಿ .ಎಸ್. ಆಗ್ರಹಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಪತ್ರ ಬರೆದಿರುವಅವರು, ಶಿಕ್ಷಕಿಯರು ಸ್ವಂತ ವಾಹನ ಚಲಿಸಲು ಆಗಲ್ಲ.ಅಲ್ಲದೆ, ಇದು ಎರಡನೇ ಮಗುವಿನ ಗರ್ಭಿಣಿಯಾಗಿರುವವರಿಗೆ ಮೊದಲನೇ ಮಗುವಿನ ಆರೈಕೆ ಕೂಡ ಇರುತ್ತದೆ.
ಜೊತೆಗೆ ಮನೆಯಲ್ಲಿ ಹಿರಿಯ ಪೋಷಕರಿಲ್ಲದೇ ಒಬ್ಬರೇ ನಿಭಾಯಿಸುವವರ ಸಂಖ್ಯೆ ಯೇ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಗರ್ಭಿಣಿ ಶಿಕ್ಷಕಿಯರು ನೂರಾರು ಕಿಮೀ ದೂರದಲ್ಲಿ ಇದ್ದರೆ , ಪ್ರಯಾಣ ಮಾಡಲು ಸಂಚಾರ ವ್ಯವಸ್ಥೆ ಇಲ್ಲದೆ ಅಸ್ತವ್ಯಸ್ತವಾಗುವ ಸಾಧ್ಯತೆಗಳಿವೆ.
ತುಂಬು ಗರ್ಭಿಣಿ ಶಿಕ್ಷಕಿಯರಿಗೆ ಕರ್ತವ್ಯದಲ್ಲಿ ವಿನಾಯಿತಿಯನ್ನು ಹಾಗೂ ಈ ಅವಧಿಯಲ್ಲಿ “ಕರೋನಾ ವಿಶೇಷ ಸಂದರ್ಭ” ಎಂದು ಪರಿಗಣಿಸಿ ಮಾತೃತ್ವ ರಜೆ ಪಡೆಯುವಂತಹ ಶಿಕ್ಷಕಿಯರಿಗೆ ಇರುವ ಪ್ರಸೂತಿ ರಜೆಯನ್ನು 6 ತಿಂಗಳಿನಿಂದ 10 ತಿಂಗಳುಗಳವರೆಗೆ ವಿಸ್ತರಿಸಬೇಕೆಂದು ನೂರಾರು ಗರ್ಭಿಣಿ ಶಿಕ್ಷಕಿಯರ ಅಳಲಿನ ಮೇರೆಗೆ ಈ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.