ಧಾರವಾಡ prajakiran.com : ಧಾರವಾಡ ನಗರದಲ್ಲಿ ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಸ್ ಬಿಡಬೇಡಿ ಅಂತಾ ಗ್ರಾಮ ಪಂಚಾಯತವೊಂದು ಪತ್ರ ಬರೆದಿದೆ.
ಧಾರವಾಡ ನಗರದ ಬಸ್ ನಮ್ಮೂರಿಗೆ ಬಿಡಬೇಡಿ ಅಂತಾ ಮನವಿ ಮಾಡಿದ್ದಾರೆ. ತಮ್ಮೂರಿನ ಬಸ್ ಸಂಚಾರ ನಿಲ್ಲಿಸಲು ಗ್ರಾಮಸ್ಥರ ಕೋರಿಕೆ ಮೇರೆಗೆ ಧಾರವಾಡ ತಾಲೂಕಿನ
ಮನಸೂರು ಗ್ರಾಮ ಪಂಚಾಯತ್ ಈ ಪತ್ರ ಬರೆದಿದೆ. ಧಾರವಾಡದಿಂದ ಮನಸೂರು ಕೇವಲ ಹದಿನೈದು ಕಿಲೋ ಮೀಟರ್ ಅಂತರದಲ್ಲಿದೆ. ಈ ಗ್ರಾಮದಿಂದ ನೂರಾರು ಜನ ಧಾರವಾಡ ನಗರಕ್ಕೆ ಪ್ರತಿ ನಿತ್ಯ ಆಗಮಿಸುತ್ತಾರೆ.
ಮನಸೂರ ಗ್ರಾಮ ಪಂಚಾಯತ್ ಅಭಿವೃದ್ದಿಅಧಿಕಾರಿಗಳು ಧಾರವಾಡ ವಿಭಾಗದ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಗ್ರಾಮಸ್ಥರ ಮನವಿ ಹಿನ್ನೆಲೆಯಲ್ಲಿ ಬಸ್ ಸೇವೆ ನಿಲ್ಲಿಸಲು ಪತ್ರ ಬರೆದಿರುವ ಗ್ರಾಪಂಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.