ರಾಜ್ಯ

ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿಗಳಾದ ಮಹಾಂತೇಶ ಶಿರೂರ, ಮಂಜುನಾಥ ಮರೇವಾಡನ ಬಂಧಿಸಿದ ರಾಮದುರ್ಗದ ಪೊಲೀಸರು

ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ತಂಗಿದ್ದ ಸರಳವಾಸ್ತುವಿನ ರೂವಾರಿ ಡಾ.ಚಂದ್ರಶೇಖರ ಗುರೂಜಿ ಹತ್ಯೆ ಮಾಡಿದ್ದ ಆರೋಪಿಗಳಾದ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡನನ್ನು ರಾಮದುರ್ಗದ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಬಳಿಕ ಪ್ರಮುಖ ಆರೋಪಿ ಮಹಾಂತೇಶ ಶಿರೂರ ಹಾಗೂ ಮಂಜುನಾಥ ‌ಮರೇವಾಡ ಪೊಲೀಸರಿಗೆ ಕರೆ ಮಾಡಿ ರಾಮದುರ್ಗದ ಕಡೆಗೆ ಹೊರಟಿರುವುದಾಗಿ ತಿಳಿಸಿದ್ದರು. ಅದರ ಜಾಡು ಹಿಡಿದು ಹೊರಟ ಹುಬ್ಬಳ್ಳಿ ಪೊಲೀಸರು ರಾಮದುರ್ಗದ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಳಿಕ ಬೆಳಗಾವಿ ಡಿವೈಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ಪೊಲೀಸರು ಆರೋಪಿಗಳ  ಕೆಡ್ಡಾ ತೋಡಿದ್ದಾರೆ.

ಚಂದ್ರಶೇಖರ ಗುರೂಜಿ ಬಳಿಯೇ ಈ ಇಬ್ಬರ ಪೈಕಿ ಒಬ್ಬರು 2016ರ ವರೆಗೆ ಸರಳವಾಸ್ತು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಹುಬ್ಬಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ಮಹಾಂತೇಶ ಶಿರೂರನ ಪತ್ನಿ ವನಜಾಕ್ಷಿ ಕೂಡ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.

ಇತ್ತೀಚೆಗೆ ಇಬ್ಬರು ಸಂಸ್ಥೆಯಿಂದ ಹೊರಬಂದಿದ್ದರು. ವನಜಾಕ್ಷಿ
ಹೆಸರಿನಿಂದ ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿ ಅಪಾರ್ಟ್‌ಮೆಂಟ್ ನಲ್ಲಿ ಫ್ಲಾಟ್ ಇತ್ತು ಎನ್ನಲಾಗಿದೆ.

ಅದನ್ನು ಮರಳಿಸುವಂತೆ ಗುರೂಜಿ ಕೇಳಿದ್ದರು. ಇದರಿಂದಾಗಿ ಕೆರಳಿದ ಮಹಾಂತೇಶ ಶಿರೂರ, ಸರಳವಾಸ್ತು ಕೆಲಸ ಬಿಟ್ಟು ಹೊರಬಂದ ನಂತರ ಬೇರೊಂದು ವಾಸ್ತು ಸಂಸ್ಥೆಯನ್ನ ಹುಟ್ಟು ಹಾಕಿದ್ದ.

ಈ ವಿಷಯವಾಗಿ ಗುರೂಜಿ ಹಾಗೂ ಮಹಾಂತೇಶ ಶಿರೂರ ನಡುವೆ ‘ಗಲಾಟೆ” ನಡೆದಿತ್ತೆಂದು ಹೇಳಲಾಗಿದೆ.

ಇದೀಗ ಆರೋಪಿಗಳ ಬಂಧನವಾಗಿದ್ದು ನೈಜ ಸತ್ಯ ಹೊರ ಬರಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *