ಅಂತಾರಾಷ್ಟ್ರೀಯ

ಕೆನರಾ ಸಂಸದ ಅನಂತಕುಮಾರ ಹೆಗೆಡೆ ಕಾಣೆಯಾಗಿದ್ದಾರೆ ಹುಡುಕಿಕೊಡಿ……!

ಕಿತ್ತೂರು prajakiran.com : ಕರೋನಾ ಸಂಕಷ್ಟದ ದಿನಗಳಲ್ಲಿ ಜನತೆ ಅಕ್ಷರಶಃ ಪರದಾಡುತ್ತಿದ್ದಾರೆ.

ಆದರೆ, ನಮ್ಮ ಗೋಳನ್ನು ಆಲಿಸಬೇಕಾದ ಮತ್ತು ಸ್ಪಂದಿಸಬೇಕಾದ ನಮ್ಮ ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ಕಿತ್ತೂರು ಜನತೆ ಕೈ ಗೆ ಸಿಗುತ್ತಿಲ್ಲ.

ಅವರನ್ನು ಹುಡುಕಿಕೊಡಿ ಎಂದು ಕಿತ್ತೂರು ಕಾಂಗ್ರೆಸ್ ಪಕ್ಷದ ಮುಖಂಡರು ತಹಸೀಲ್ದಾರ ಮೂಲಕವೇ ಸೋಮವಾರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಅವರು ಬರೆದ ಮನವಿ ಪತ್ರದ ಸಾರಾಂಶ ಹೀಗಿದೆ.

ಗೆ
ತಹಸೀಲ್ದಾರ ಸಾಹೇಬರು,
ಚೆನ್ನಮ್ಮನ ಕಿತ್ತೂರು,

ವಿಷಯ : ಕಳೆದುಕೊಂಡ ನಮ್ಮ ಸಂಸದರನ್ನು ಹುಡುಕಿಕೊಡುವ ಕುರಿತು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆನರಾ ಸಂಸದರು ಆದಂತಹ ಶ್ರೀ ಅನಂತಕುಮಾರ ಹೆಗಡೆ ಅವರು ನಮ್ಮ ಕಿತ್ತೂರು ಸಂಸದರು ಹೌದು.

ಆದರೆ ಕಳೆದ ಕೆಲವು ವರ್ಷಗಳಿಂದ ಅವರು ನಮ್ಮ ಕ್ಷೇತ್ರದಲ್ಲಿ ಕಂಡಿಲ್ಲ. ಮಹಾಮಾರಿ ಕರೋನಾ ಸಂದರ್ಭದಲ್ಲಿ ನಮ್ಮ ಕಿತ್ತೂರು ಜನತೆ ಸಾವು ನೋವು ಅನುಭವಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಅವರು ಯಾವುದೇ ತುರ್ತು ಸಭೆಗೆ ಹಾಜರ್ ಇರದೆ ನೋಡಿದರೆ ಅವರು ನಾಪತ್ತೆ ಆಗಿರಬಹುದು ಎಂಬುದು ನಮ್ಮ ಕಿತ್ತೂರು ಜನತೆ ಅಭಿಪ್ರಾಯ ವಾಗಿದೆ.

ಆದ್ದರಿಂದ ತಾವು ಆದಷ್ಟು ಬೇಗ ಅವರನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡರು.

 

ಈ ಮನವಿ ಪತ್ರದ ಜೊತೆಗೆ ಅವರು ಕಾಣೆಯಾಗಿದ್ದಾರೆ ಎಂಬ ಕರಪತ್ರಗಳನ್ನು ಹಂಚಿ, ಜನರ ಗಮನ ಸೆಳೆದರು.

ಈ ಸಂದರ್ಭದಲ್ಲಿ ರಾಜ್ಯ ಎನ್ ಎಸ್ ಯು ಐ ಕಾರ್ಯದರ್ಶಿ ಮಹಾಂತೇಶ ಕಂಬಾರ, ಅರುಣಕುಮಾರ ಬಿಕ್ಕಣ್ಣವರ, ಚಂದ್ರು ಮಾಳಗಿ, ಕೆಪಿಸಿಸಿ ಸಂಚಾಲಕ
ಪಿ.ಕೆ ನೀರಲಕಟ್ಟಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *