ಬೆಂಗಳೂರು prajakiran.com :
ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ರಾಸಲೀಲೆ ಸಿಡಿ ಪ್ರಕರಣದಲ್ಲಿ ಇದ್ದ ಎನ್ನಲಾದ ಯುವತಿ ವೈದ್ಯಕೀಯ ಪರೀಕ್ಷೆ ಬುಧವಾರ ನಡೆಯಿತು.
ಬೆಂಗಳೂರಿನ ಶಿವಾಜಿನಗರದಲ್ಲಿ ಇರುವ ಬೌರಿಂಗ್ ಆಸ್ಪತ್ರೆಯಲ್ಲಿ ಜನರಲ್ ತಪಾಸಣೆ ಮಾಡಿದ ಬಳಿಕ ಆಕೆಯ ಲೈಂಗಿಕ ಸಂಪರ್ಕ, ಸ್ಪರ್ಮ್, ಕೂದಲು, ಉಗುರು ಹಾಗೂ ರಕ್ತ ಪರೀಕ್ಷೆ ನಡೆಸಲಾಯಿತು.
ಸದ್ಯ ಯುವತಿ ಮಾನಸಿಕವಾಗಿ ಬಳಲಿದ್ದು, ಜೀವ ಭಯದಲ್ಲಿ ಬಿಡುವಿಲ್ಲದೆ ಓಡಾದಿದ್ದರಿಂದ ಸ್ವಲ್ಪ ಬಳಲಿದ್ದಾಳೆ.
ಹೀಗಾಗಿ ಖಿನ್ನತೆಗೆ ಒಳಗಾಗಿದ್ದಾಳೆ. ವಿಶ್ವಾಂತಿ ನಂತರ ಚೇತರಿಸಿಕೊಳ್ಳಲಿದ್ದಾಳೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಪರೀಕ್ಷೆ ಬಳಿಕ ಅವುಗಳ ತಪಾಸಣೆಗೆ ಎಫ ಎಸ್ ಎಲ್ ಪೊಲೀಸರ ಮೂಲಕ ರವಾನೆ ಮಾಡಲಾಗಿದೆ.
ಎಸ್ ಐ ಟಿ ಪೊಲೀಸರು ಆಕೆಯ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಸಂಜೆ ವೇಳೆಗೆ ಸ್ಥಳ ಮಹಜರು ನಡೆಸಿ, ಡಿಜಿಟಲ್ ಸಾಕ್ಷ್ಯ ಅಂದರೆ ಅಪಾರ್ಟ್ ಮೆಂಟ್ ಗೆ ಬಂದು ಹೋಗಿರುವ
ಸಿಸಿ ಟಿವಿ ಪೂಟೇಜ್ , ಮೋಬೈಲ್ ಲೋಕಷನ್ ಹಾಗೂ ವಾಟ್ಸ್ ಅಪ್ ಚಾಟ್ ಹೀಗೆ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ.
ಈ ವೇಳೆ ಯುವತಿ ಎಸ್ ಐ ಟಿ ವಿಚಾರಣೆಯಲ್ಲಿ ಆ ರಾಸಲೀಲೆ
ವೀಡಿಯೋ ದಲ್ಲಿರುವುದು ತಾನೆ, ಆ ಆಡೀಯೋ ಕೂಡ ತನ್ನದೆ ಎಂದು ಒಪ್ಪಿಕೊಂಡಿದ್ದಾಳೆ.
ಅಲ್ಲದೆ, ಸ್ವತಃ ರಮೇಶ ಜಾರಕಿಹೊಳಿ ತನಗೆ ಮೊಬೈಲ್ ಕೊಡಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮೆಡಿಕಲ್ ಟೆಸ್ಟ್ ಅಂತ್ಯಗೊಂಡ ಬೆನ್ನ ಹಿಂದೆಯೇ ವಕೀಲ ಜಗದೀಶ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
- ಇತ್ತ ಸಿಡಿ ಯುವತಿ ಪ್ರತ್ಯಕ್ಷವಾದ ಬೆನ್ನಲ್ಲೇ ಮಾಜಿ ರಸಮಚಿವ ರಮೇಶ ಜಸರಕಿಹೊಳಿ ನಾಪತ್ತೆಯಾಗಿದ್ದಾರೆ.
- ಅಜ್ಞಾತ ಸ್ಥಳ ಕ್ಕೆ ತೆರಳಿರುವ ಅವರು ಸಹೋದರ ಬಾಲಚಂದ್ರ ಜಾರಕಿಹೊಳಿ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ .
- ಬಂಧನ ಭೀತಿಯಿಂದ ಪಾರಾಗಲು ಅವರ ನಿನ್ನಯಷ್ಮೇ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಪಡೆದಿದ್ದರು.