ಹಾವೇರಿ prajakiran.com ಕೃಷಿ ಸಚಿವ ಬಿ.ಸಿ. ಪಾಟೀಲ್ ಕರೊನಾ ಲಸಿಕೆಯನ್ನ ತಮ್ಮ ಮನೆಯಲ್ಲಿ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯ ಅಧಿಕಾರಿ ಜಾವಿದ್ ಮಕಾಂದರ್ ಅವರನ್ನು ಕೆಲಸದಿಂದ ಅಮನಾತು ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಹಿರೆಕೆರೂರಿನ ತಮ್ಮ ನಿವಾಸದಲ್ಲಿ ಮಾಚ್೯ 2 ರಂದು ಸಚಿವ ಬಿ.ಸಿ.ಪಾಟೀಲ್ ಹಾಗೂ ಪತ್ನಿ ವನಜಾ ಪಾಟೀಲ್ ಇಬ್ಬರು ಕೋವಿಡ್ ವ್ಯಾಕ್ಸಿನ್ ಪಡೆದು ಅಧಿಕಾರಿ ದುರುಪಯೋಗ ಮಾಡಿಕೊಂಡಿರುವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು.
ಈ ಸಂಬಂಧ ಭಾರತೀಯ ಆರೋಗ್ಯ ಸೇವೆ ಆಯುಕ್ತ ಕೆ.ವಿ. ತ್ರಿಲೋಕ ಚಂದ್ರ ಅಮಾನತು ಆದೇಶ ಹೊರಡಿಸಿದ್ದಾರೆ.
ಇದಾದ ಬಳಿಕ ಎಚ್ಚೆತ್ತುಕೊಂಡ ಸಚಿವ ಬಿ.ಸಿ ಪಾಟೀಲ ಎರಡನೇ ಲಸಿಕೆಯನ್ನು ಆಸ್ಪತ್ರೆಗೆ ತೆರಳಿ ತೆಗೆದುಕೊಂಡಿದ್ದಾರೆ.