ಧಾರವಾಡ prajakiran.com : ಇಲ್ಲಿಯ ತೇಜಸ್ವಿ ನಗರ ರೈಲ್ವೆ ಬ್ರಿಡ್ಜ್ ಬಳಿ ಹಳಿಯ ಮೇಲೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ರೈಲು ವ್ಯಕ್ತಿಗೆ ಹಾಯ್ದು ಕಾಲು ಕತ್ತರಿಸಿದ ಘಟನೆ ನಡೆದಿದೆ.
ರೈಲು ಹಾಯ್ದು ಎರಡು ಕಾಲುಗಳನ್ನು ವ್ಯಕ್ತಿ ಕಳೆದುಕೊಂಡು ಒದ್ದಾಡುವ ದೃಶ್ಯ ಸ್ಥಳಿಯರು ಮೋಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಘಟನೆ ಕುರಿತು ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೋಲಿಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಇನ್ನೂ ವ್ಯಕ್ತಿ ಕುರಿತು ಮಾಹಿತಿ ತಿಳಿದು ಬಂದಿಲ್ಲ. ಆತನನ್ನು ರೈಲ್ವೆ ಸಿಬ್ಬಂದಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ರೈಲು ಹಳ್ಳಿಯ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಹಳ್ಳಿಯತ್ತ ಬಂದಿದ ಎನ್ನಲಾಗಿದೆ.
ಘಟನೆ ಕುರಿತು ಹುಬ್ಬಳ್ಳಿ ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.