ಧಾರವಾಡ : ವ್ಯಕ್ತಿಯೊಬ್ಬ ಹಳ್ಳದಲ್ಲಿ ತೇಲಿಕೊಂಡು ಹೋದ ಘಟನೆ ಧಾರವಾಡ ತಾಲೂಕಿನ ಕೋಟೂರು ಬಳಿ ನಿನ್ನೆ ಸಂಜೆ ಸಂಭವಿಸಿದೆ.
ಕೋಟೂರು ಗ್ರಾಮದ ಬಾಷಾಸಾಬ ಫಕ್ರುಸಾಬ ಕುರ್ಲಿ (41) ಎಂಬಾತನೇ ತೇಲಿಹೋದ ವ್ಯಕ್ತಿ.
ನಿನ್ನೆ ಬೇಲೂರು ಕೈಗಾರಿಕೆ ಪ್ರದೇಶದಿಂದ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದ ಸಮಯದಲ್ಲಿ ಪಕ್ಕದ ತುಪರಿಹಳ್ಳ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಹಳ್ಳದಲ್ಲಿ ತೇಲಿಹೋಗಿರುವ ವ್ಯಕ್ತಿ ಇದುವರೆಗೂ ಪತ್ತೆಯಾಗಿಲ್ಲ.
ಪೊಲೀಸ್ ಮತ್ತು
ಅಗ್ನಿಶಾಮಕದಳ ಸಿಬ್ಬಂದಿ ಶೋಧನಾ ಕಾರ್ಯ ಮುಂದುವರೆಸಿದ್ದಾರೆ.
ಹಳ್ಳದಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾಗುತ್ತಿದ್ದು, ಶೋಧನಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.