ಧಾರವಾಡ prajakiran.com : ಜುಲೈ ಒಂದರಿಂದ ಈವರೆಗೆ ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಹಾನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಸುಮಾರು 561 ಮನೆಗಳು ಭಾಗಶ: ಹಾನಿಯಾಗಿವೆ ಎಂದು ಜಿಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಒಂದೇ ದಿನ 191 ಮನೆಗಳು ಭಾಗಶ: ಹಾನಿಯಾಗಿವೆ. ಒಂದು ಜಾನುವಾರು ಜೀವಹಾನಿಯಾಗಿದ್ದು, ಪರಿಹಾರ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
*158 ಶಾಲೆ, 130 ಅಂಗನವಾಡಿ ಕೇಂದ್ರಗಳಲ್ಲಿ ಸೋರಿಕೆ*:
ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಸುಮಾರು 158 ಶಾಲೆಗಳ ಶಾಲಾ ಕಟ್ಟಡ ಹಾಗೂ 130 ಅಂಗನವಾಡಿ ಕೇಂದ್ರಗಳು ಅತೀ ತೇವಾಂಶದಿಂದಾಗಿ ಸೋರಿಕೆಯಾಗುತ್ತಿವೆ ಎಂದು ಅವರು ತಿಳಿಸಿದರು