ಬೆಂಗಳೂರು prajakiran.cm : ರಾಜ್ಯದಲ್ಲಿ ಕೊರೋನಾ ಹೆಚ್ಚಾದ ಪರಿಣಾಮ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ.
ಇದೀಗ ಹೆಚ್ಚು ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಈಗಲಾದರೂ ಶಾಲೆಗಳನ್ನು ಪುನರಾರಂಭಿಸುವಂತೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಶಿಕ್ಷಣ ಸಚಿವರಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಶಾಲೆಗಳನ್ನು ಯಾಕೆ ಆರಂಭಿಸಬೇಕು ಎನ್ನುವ ಅಂಶಗಳನ್ನು ಉಲ್ಲೇಖಿಸಿರುವುದು ಅಚ್ಚರಿಗೆ ಕಾರಣವಾಗಿದೆ.
15 ತಿಂಗಳಿನಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆಯಿಲ್ಲ. ಸಿಟಿ ಮಕ್ಕಳಿಗೆ ಆನ್ಲೈನ್ ತರಗತಿಯಾದರೂ ಇದೆ.
ಆದರೆ ಗ್ರಾಮೀಣ ಭಾಗದ ಮಕ್ಕಳು ಇವೆಲ್ಲದರಿಂದ ವಂಚಿರಾಗುತ್ತಿದ್ದಾರೆ.
ಶಾಲೆ ಪ್ರಾರಂಭವಾದರೂ ಎಲ್ಲ ಮಕ್ಕಳು ಶಾಲೆಗೆ ಬರುವುದಿಲ್ಲ. ಶಾಲೆ ಬಂದ್ ಆಗಿದ್ದರಿಂದ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಈ ಎಲ್ಲ ಅಂಶಗಳನ್ನು ಗಮನಿಸಿ ಶಾಲೆ ಆರಂಭಿಸಬೇಕು ಎಂದು ಪತ್ರ ಬರೆಯಲಾಗಿದೆ.
ಈ ಪತ್ರಕ್ಕೆ ಸರ್ಕಾರ ಉತ್ತರಿಸಿದ್ದು, ಸದ್ಯಕ್ಕೆ ಶಾಲೆ ಪುನಾರಂಭ ಬೇಡ. ಹಾಗೆ ಮಾಡಿದಲ್ಲಿ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಸಮಜಾಯಿಷಿ ಹೇಳಿದೆ.