ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಆರು ದಿನ ಇಡಿ ಕಸ್ಟಡಿಗೆ
*ದೆಹಲಿ ಅಬಕಾರಿ ನೀತಿ ಅಕ್ರಮ ಹಣದ ಕಿಕ್ ಬ್ಯಾಕ್ ಕಿಂಗ್ ಪಿನ್*
*ಮಾಜಿ ಡಿಸಿಎಂ ಮನೀಸ್ ಸಿಸೋಡಿಯಾ ಬಂಧನ ಬಳಿಕ ಸಿಎಂ ಕೇಜರಿವಾಲ್ ಗೆ ಸಂಕಷ್ಟ*
*ತೆಲಂಗಾಣ ಮಾಜಿ ಸಿಎಂ ಕೆ ಸಿ ಆರ್ ಪುತ್ರಿ ಕವಿತಾಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿಸ ಸುಪ್ರೀಂಕೋರ್ಟ್*
ನವದೆಹಲಿ ಪ್ರಜಾಕಿರಣ.ಕಾಮ್ : ಒಂಬತ್ತು ಬಾರಿ ವಿಚಾರಣೆಗೆ ಹಾಜರು ಆಗುವಂತೆ ಸಮನ್ಸ್ ನೀಡಿದರೂ ಕ್ಯಾರೆ ಎನ್ನದ ದೆಹಲಿ ಸಿಎಂ ಅರವಿಂದ ಕೇಜರಿವಾಲ್ ಅವರನ್ನು ಗುರುವಾರ ರಾತ್ರಿ ಬಂಧಿಸಿತ್ತು.
ಇದೀಗ ಅವರನ್ನು ಆರು ದಿನಗಳ ಕಾಲ ಇಡಿ ತನ್ನ ಕಸ್ಟಡಿಗೆ ಪಡೆದಿದೆ.
ಮದ್ಯದ ಉದ್ಯಮಿ ಮೂಲಕ ಆಮ್ ಆದ್ಮಿ ಮುಖಂಡ ವಿಜಯ ನಾಯರ್ ಮೂಲಕ 300 ಕೋಟಿ ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಕಿಕ್ ಬ್ಯಾಕ್ ಪಡೆದ ಕಿಂಗ್ ಪಿನ್ ಎಂದು ಇಡಿ ಆರೋಪಿಸಿದೆ.
ಸುಮಾರು ಮುನ್ನೂರು ಕೋಟಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಅಬಕಾರಿ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಹಾಗೂ ತೆಲಂಗಾಣ ಮಾಜಿ ಸಿಎಂ ಕೆ ಸಿ ಆರ್ ಪುತ್ರಿ ಕವಿತಾ ಅವರನ್ನು ಕೂಡ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.
ಅವರ ಬಂಧನದ ಬಳಿಕ ವಿಚಾರಣೆಗೆ ಹಾಜರು ಆಗುವಂತೆ ಹಲವು ಬಾರಿ ನೋಟಿಸ್ ನೀಡಿದ್ದರು.
ವಿಚಾರಣೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಅವರ ನಿವಾಸಕ್ಕೆ ತೆರಳಿ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅರೆಸ್ಟ್ ಮಾಡಿದ್ದರು.
ಅಲ್ಲದೆ, ಅವರ ಮೊಬೈಲ್ ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ಅವರನ್ನು ಆರು ದಿನಗಳ ಕಾಲ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ಬಳಿಕ ಮಾರ್ಚ್ 28ರ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಇದೇ ವೇಳೆ ತೆಲಂಗಾಣ ಮಾಜಿ ಸಿಎಂ ಕೆ ಸಿ ಆರ್ ಪುತ್ರಿ ಕವಿತಾ ಅವರಿಗೆ ಜಾಮೀನು ಮಂಜೂರು ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಸೂಚಿಸಿದೆ.