ಚಾಲುಕ್ಯ ಬಡಾವಣೆ ಹಿತ ರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆ
ಧಾರವಾಡ prajakiran.com : ಇಲ್ಲಿಯ ಚಾಲುಕ್ಯ ಬಡಾವಣೆ ಹಿತ ರಕ್ಷಣಾ ಸಂಘದ ಅಧ್ಯಕ್ಷರಾಗಿ ಲತಾ ಮುಳ್ಳೂರ ಪುನರ್ ಆಯ್ಕೆಯಾಗಿದ್ದಾರೆ.
ಈ ಕುರಿತು ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳು ಪುನರ್ ಆಯ್ಕೆ ಆದರು.
ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ಅವರು ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಅಧ್ಯಕ್ಷರಾಗಿ ಪುನರ್ ಆಯ್ಕೆ ಆದರು.
ಅದೇ ರೀತಿ ಪ್ರಧಾನ ಕಾರ್ಯದರ್ಶಿ ಗಳಾಗಿ ಬಸವರಾಜ ಕೋಷ್ಠಿ, ಕೋಶಾಧ್ಯಕ್ಷರನ್ನಾಗಿ ಅಶೋಕ ಸಿಂದಗಿ, S. N. ಹೆಬ್ಬಾಳ ಅವರು ಗೌರವ ಅಧ್ಯಕ್ಷ ರಾಗಿ, ಚಂದ್ರಶೇಖರ ಗರಡಿ ಅವರನ್ನು ಅಭಿವೃದ್ಧಿ ಸಲಹೆಗಾರರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇನ್ನೂ ಉಪಾಧ್ಯಕ್ಷರಾಗಿ ಮಧುಕರ .D. ಗರಗ ಹಾಗೂ ಗಿರಿಜಾ ನವಲಗುಂದ,
ಸಂಘಟನಾ ಕಾರ್ಯದರ್ಶಿ ಗಳಾಗಿ ಹುಸೇನಸಾಬ ವಾಲಿಕಾರ ಹಾಗೂ ಈರನಗೌಡ ಪಾಟೀಲ, ಸಹಕಾರ್ಯದರ್ಶಿಗಳಾಗಿ ಮಮತಾ ಮಲ್ಲಾಪುರ ಹಾಗೂ ಸವಿತಾ ದೊಡಮನಿ ಹಾಗೂ ನಂದಾ ಇಟಗಿ ಅವರು ಸರ್ವಾನುಮತದಿಂದ ಆಯ್ಕೆಯಾದರು.