ಧಾರವಾಡ ಪ್ರಜಾಕಿರಣ.ಕಾಮ್ :
ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಧಾರವಾಡದ
ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದಲ್ಲಿ ನಾಡಿನ ಪ್ರಜ್ಞಾವಂತರು ತಲೆ ತಗ್ಗಿಸುವಂತಹ ಮಾಟ ಮಂತ್ರದ ವಸ್ತುಗಳು ಪತ್ತೆಯಾಗಿವೆ.
ಹೌದು ಇದು ಅಚ್ಚರಿಯಾದರೂ ನಂಬಲೇಬೇಕಾದ ಕಟು ಸತ್ಯವಾಗಿದೆ.
ಕವಿವಿಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಗುಂಡುರಾವ್ ಅವರ ಮೇಜಿನಲ್ಲಿ ಈ ವಾಮಾಚಾರ ಮಾಡಲಾಗಿದೆ.
ಅದೇ ವಿಭಾಗದ ಇನ್ನೊಬ್ಬ ಪ್ರಾಧ್ಯಾಪಕರ ಮೇಲೆ ಅವರು ಶಂಕೆ ವ್ಯಕ್ತಪಡಿಸಿ, ಕುಲಪತಿಯವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ರಜೆ ಮೇಲೆ ತೆರಳಿದ್ದಾಗ ಈ ದುಷ್ಕೃತ್ಯ ಎಸಗಿದ್ದು, ಶುಕ್ರವಾರ ವಾಪಸ್ ಆಗಮಿಸಿದಾಗ ಇದು ಬೆಳಕಿಗೆ ಬಂದಿದೆ.
ಟೇಬಲ್ ಮೇಲೆ ಕಪ್ಪು ಬಣ್ಣದ ಗೊಂಬೆ, ಹಾಗೂ 3 ನಿಂಬೆ ಹಣ್ಣು , ಅರಿಸಿಣ-ಕುಂಕುಮ ಹಾಕಲಾಗಿದೆ.
ಆತಂಕದ ಸಂಗತಿಯೆಂದರೆ ಕಿಟಕಿ ಮೂಲಕ ಈ ಕೃತ್ಯ ಏಸಗಲಾಗಿದೆ.
ಈ ಬಗ್ಗೆ ಕವಿವಿ ಕುಲಪತಿ ಡಾ.ಕೆ.ಬಿ. ಗುಡಸಿ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.