ರಾಜ್ಯ

ಧಾರವಾಡದ ಕರ್ನಾಟಕ ಕಾಲೇಜಿನ ಗಾರ್ಡ್‌ನ ನಲ್ಲಿ ಎರಡು ಗುಂಪು ಪರಸ್ಪರ ಬಡಿದಾಟ…..!

ಧಾರವಾಡ prajakiran.com  : ಎರಡು ಯುವಕರ ಗುಂಪು ಪರಸ್ಪರ ಬಡಿದಾಡಿದ ಪ್ರಕರಣ ಧಾರವಾಡದ ಕರ್ನಾಟಕ ಕಾಲೇಜಿನ ಮುಂದಿನ ಗಾರ್ಡ್‌ನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಕಾಲೇಜಿನ ಆವರಣದೊಳಗೆ ನುಗ್ಗಿದ ಯುವಕರ ಗುಂಪು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದೆ.

ಇದರಿಂದ ಕಾಲೇಜಿನ ಆವರಣದಲ್ಲಿ ಕೆಲ ಹೊತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು.

ಹೊರಗಡೆಯಿಂದ ಬಂದ ಯುವಕರ ಗುಂಪು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗುತ್ತಿದ್ದು, ಘಟನೆಗೆ ಕಾರಣ ಏನೆಮದು ಗೊತ್ತಾಗಿಲ್ಲ.

ಕೆಸಿಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಫೇಲಾಗಿರುವ ಯುವಕರು ಗುಂಪುಗೂಡಿ ಹೊಸ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವುದು, ಹೆದರಿಸಿ,ಬೆದರಿಸಿ ಹಣ ಪೀಕುವುದು ನಡೆದಿದೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ.

ಎರಡು ದಿನಗಳ ಹಿಂದಷ್ಟೆ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ಗ್ಯಾಂಗ್ ಗಳ‌ ಮಧ್ಯೆ ಮಾರಾಮಾರಿ ನಡೆದಿತ್ತು.

ಇದೀಗ ಅದಾದ ಎರಡೇ ದಿನಕ್ಕೆ ಮತ್ತೊಂದು ಬೀದಿ ಕಾಳಗ ನಡೆದಿದೆ.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಗಳ, ಪುಡಾರಿಗಳ ಹಾಗೂ ವಿಶೇಷವಾಗಿ ಮೀಟರ್ ಬಡ್ಡಿ ಕುಳಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಇದರಿಂದ, ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿರುವ ಇಂಥವರನ್ನು ಪೊಲೀಸರು ಮಟ್ಟ ಹಾಕಬೇಕಿದೆ.

ಇಲ್ಲದಿದ್ದರೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಗರದಲ್ಲಿ ಗಲಾಟೆ ನಡೆಸುವರ ಪ್ರಮಾಣ ಕೂಡ ಹೆಚ್ಚಲಿದೆ ಎಂಬ ಆತಂಕ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *