ರಾಜ್ಯದಲ್ಲಿ 6561 ಜನ ಬಿಡುಗಡೆ
ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 93 ಜನ ಸಾವನ್ನಪ್ಪಿದ್ದಾರೆ.
ಮತ್ತೆ ಹೊಸದಾಗಿ 7571 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2,64,546 ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 6561 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,76,942 ಜನ ಗುಣಮುಖರಾಗಿದ್ದು, 83,066 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 698 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶುಕ್ರವಾರವೂ 93 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 4522ಕ್ಕೆ ಏರಿಕೆಯಾದಂತಾಗಿದೆ.
ಶುಕ್ರವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಬೆಂಗಳೂರಿನಲ್ಲಿ ಬರೋಬ್ಬರಿ 2948 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.
ಇನ್ನೂಳಿದಂತೆ ಬಾಗಲಕೋಟೆ 115, ಬಳ್ಳಾರಿ 540,ಬೆಳಗಾವಿ 384, ಬೆಂಗಳೂರು ಗ್ರಾಮಾಂತರ 79, ಬೀದರ 73, ಚಾಮರಾಜನಗರ 59, ಚಿಕ್ಕಬಳ್ಳಾಪುರ 61, ಚಿಕ್ಕಮಗಳೂರು 102, ಚಿತ್ರದುರ್ಗ 98, ದಕ್ಷಿಣ ಕನ್ನಡ 102, ದಾವಣಗೆರೆ 237, ಧಾರವಾಡ 252, ಗದಗ 174, ಹಾಸನ 144, ಹಾವೇರಿ 224, ಕಲಬುರಗಿ 145, ಕೊಡಗು 65, ಕೋಲಾರ 50, ಕೊಪ್ಪಳ 234, ಮಂಡ್ಯ 99, ರಾಯಚೂರು 100, ರಾಮನಗರ 75, ಶಿವಮೊಗ್ಗ 277, ತುಮಕೂರು 136, ಉಡುಪಿ 278, ಉತ್ತರಕನ್ನಡ 91, ವಿಜಯಪುರ 124, ಯಾದಗಿರಿ 255 ಹೀಗೆ ಒಟ್ಟು 29 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಶುಕ್ರವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 22 ಜನ ಸಾವನ್ನಪ್ಪಿದ್ದಾರೆ.
ಬಳ್ಳಾರಿ 9, ಬೆಳಗಾವಿ, ಕಲಬುರಗಿ ಹಾಗೂ ದಾವಣಗೆರೆ ತಲಾ 7, ಕೊಪ್ಪಳ, ದಕ್ಷಿಣ ಕನ್ನಡ ತಲಾ 5, ವಿಜಯಪುರ, ಹಾವೇರಿ ಹಾಗೂ ಬೀದರ ತಲಾ 4, ರಾಯಚೂರು, ತುಮಕೂರು ಹಾಗೂ ಧಾರವಾಡ ತಲಾ 3, ಕೋಲಾರ, ಕೊಡಗು,ಹಾಸನ, ಚಿಕ್ಕಮಗಳೂರು ತಲಾ 2, ಗದಗ, ಮಂಡ್ಯ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.