ಬೆಂಗಳೂರು prajakiran.com : ಜುಲೈ 1ರಿಂದ ಜುಲೈ 31 ರವರೆಗೆ ರಾಜಕೀಯ ಕಾರ್ಯಕ್ರಮ, ಸಭೆ, ಸಮಾರಂಭ ಮಾಡುವಂತಿಲ್ಲ, ಶಾಲೆ, ಕಾಲೇಜು ಆರಂಭಿಸುವಂತಿಲ್ಲ ಎಂದು ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಮೆಟ್ರೋ, ಜಿಮ್ ಚಿತ್ರಮಂದಿರ ಬಂದ್ ಮುಂದುವರೆಯಲಿದೆ ಎಂದರು.
ಇದೇ ವೇಳೆ ಅಂತರ್ ರಾಷ್ಟ್ರೀಯ ವಿಮಾನ ಸಂಚಾರ ಬಂದ್ ಇರಲಿದೆ. ಇದರೊಂದಿಗೆ ಮನರಂಜನೆ ಪಾರ್ಕ್ ಬಂದ್ ಎಂದು ಮಾರ್ಗಸೂಚಿ ತಿಳಿಸಿದೆ.
ಜುಲೈ 5ರಿಂದ ಮುಂದಿನ 5 ಭಾನುವಾರ್ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಇರಲಿದೆ. ನೂರಕ್ಕೆ ನೂರು ಪ್ರತಿಶತ ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಪ್ರಶ್ನೇಯೇ ಇಲ್ಲ.
ಇಡೀ ರಾಜ್ಯವನ್ನು ಲಾಕ್ ಡೌನ್ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಕಾರ್ಯಪಡೆ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ. ಕರೋನಾ ಸೋಂಕು ಹೆಚ್ಚಳವಿರುವ ಕಡೆ ಮಾತ್ರ ಸೀಲ್ ಡೌನ್ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.
ಬಹಳಷ್ಟು ಜನರು ಆಹಾರ ಧಾನ್ಯ ಸಂಗ್ರಹಿಸಿಕೊಂಡಿಲ್ಲ.ಅವರು ದುಡಿದು ತಿನ್ನುವ ಜನರಿದ್ದಾರೆ. ಅವರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಅನುಸರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಯಥಾವತ್ತಾಗಿ ಪಾಲಿಸುತ್ತಿದೆ. ಅದರಲ್ಲಿ ಯಾವುದೇ ಮಾರ್ಪಾಡು ಮಾಡಲು ಸಿದ್ದವಾಗಿಲ್ಲ. ರಾಜ್ಯದಲ್ಲಿ ಜುಲೈ 4 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾತನಾಡುತ್ತಿದೆ. ಅದರಲ್ಲಿ ಏನಿರುತ್ತದೆ, ಏನಿರಲ್ಲ ಎಂಬುದು ಕಾದು ನೋಡಬೇಕಿದೆ.