ಧಾರವಾಡ prajakiran.com : ಧಾರವಾಡ ಜರ್ನಲಿಸ್ಟ್ ಗಿಲ್ಡ್ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯ ಮಾಡಲಾಯಿತು.
ಗಿಲ್ಡ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ೧೧ ಜನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಬಸವರಾಜ ಹಿರೇಮಠ,
ಉಪಾಧ್ಯಕ್ಷರಾಗಿ ಪ್ರಜಾಕಿರಣ.ಕಾಮ್ ನ ಪ್ರಧಾನ ಸಂಪಾದಕ ನಾಗರಾಜ ಕಿರಣಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಕಗ್ಗಣ್ಣವರ,
ಖಜಾಂಚಿಯಾಗಿ ಮಂಜುನಾಥ ಅಂಗಡಿ, ಕಾರ್ಯಕಾರಿ ಸಮಿತಿಗೆ ಸೂರ್ಯಕಾಂತ ಶಿರೂರ, ಆರ್. ಶ್ರೀನಿಧಿ, ಶ್ರೀಕಾಂತ ಬೆಟಗೇರಿ, ಮಹಾಂತೇಶ ಕಣವಿ, ಶಿವಕುಮಾರ ಹಳ್ಯಾಳ, ಬಸವರಾಜ ಅಳಗವಾಡಿ, ಸದ್ದಾಂ ಮುಲ್ಲಾ ಅವರನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ರವಿ ಕುಲಕರ್ಣಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.