ಧಾರವಾಡ prajakiran.com : ನಮ್ಮ ಪಕ್ಷದ ಹೈಕಮಾಂಡ್ ನ ನಿರ್ಧಾರಗಳು ಕೆಲವೊಂದು ದೇವರಿಗೆ ಹಾಗೂ ಅವರಿಗೆ ಮಾತ್ರ ತಿಳಿದಿರುತ್ತದೆ. ಅವರೆನೇ ಮಾಡಿದ್ರು ಹೊಸ ವಿಚಾರ ಇಟ್ಕೊಂಡು ಮಾಡಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಅವರು ನಗರದಲ್ಲಿಂದು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಹೊಂದಾಣಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾಲ್ಕು ದಿನಗಳ ಬಳಿಕ ತಿಳಿಯುತ್ತದೆ ಎಂದು ತಿಳಿಸಿದರು.
ಅಂತೆಯೇ, ಖಾಸಗಿ ಶಿಕ್ಷಕರ ಬೇಡಿಕೆ ಕುರಿತು ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಕಳೆದ ಮೂರು ದಿನದಿಂದ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ.
ಈ ಬಗ್ಗೆ ನಿನ್ನೆ ಶಿಕ್ಷಣ ಮಂತ್ರಿ ಕರೆ ಮಾಡಿದ್ದರು. ಕಾಲಾವಕಾಶ ಕೊಡಿ ಎಂದು ಮಾತನಾಡಿದ್ದಾರೆ.
ಅಲ್ಲದೇ, ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಭರವಸೆಯನ್ನ ಕೊಟ್ಟಿದ್ದಾರೆ ಎಂದು ಬಸವರಾಜ ಹೊರಟ್ಟಿ ಹೇಳಿದರು.