ಧಾರವಾಡ prajakiran.com : ಸಿಎಂ ಬಿಎಸ್ವೈಗೆ ಕರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಧಾರವಾಡ ಜಿಲ್ಲಾಧಿಕಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಟೆಸ್ಟಿಂಗ್ ಗೆ ಒಳಪಟ್ಟಿದ್ದಾರೆ.
ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂಗೆ ಭೇಟಿಯಾಗಿದ್ದರು.
ಬೆಳಗಾವಿಗೆ ತೆರಳುವ ಮುಂಚೆ ಸಿಎಂ ಭೇಟಿ ಮಾಡಿದ ಹಿನ್ನೆಲೆಯಲ್ಲಿ ತಪಾಸಣೆಗೊಳಪಟ್ಟ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ.
ಹುಬ್ಬಳ್ಳಿ ಏರಪೋರ್ಟ್ ಗೆ ಕೆಲ ಸಮಯ ತಂಗಿ ಹೋಗಿದ್ದ ಸಿಎಂ ಬಿ ಎಸ್ ವೈ
ಮಾಸ್ಕ್ ಹಾಕಿಕೊಂಡು, ಅಂತರ ಪಾಲಿಸಿದ್ದೇವೆ
ಈಗಷ್ಟೇ ನಾನು ಸಹ ಟೆಸ್ಟ್ ಮಾಡಿಸಿಕೊಂಡಿದ್ದೇನೆ
ಹು-ಧಾ ಪೊಲೀಸ್ ಆಯುಕ್ತರಿಗೂ ಟೆಸ್ಟ್ ಮಾಡಿಸಿಕೊಳ್ಳಲು ಹೇಳಿದ್ದೇನೆ
ಯಾರೂ ಸಹ ಹತ್ತಿರ ಹೋಗಿರಲಿಲ್ಲ
ಆರು ಅಡಿ ಅಂತರದಲ್ಲೇ ಇದ್ದೆವು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.