ಹುಬ್ಬಳ್ಳಿ-ಧಾರವಾಡ prajakiran.com ಎಕ್ಸಕ್ಲೂಸಿವ್ : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕಾನೂನು ಮತ್ತು ಸುವ್ಯವಸ್ಥೆ ನೂತನ ಡಿಸಿಪಿಯಾಗಿ ಕೆ. ರಾಮರಾಜನ್ ಅವರನ್ನು ನೇಮಕಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪೃವೀಣ ಸೂದ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಕೆ. ರಾಮರಾಜನ್ ಅವರನ್ನು ಮುಂದಿನ ಆದೇಶದವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಡಿಸಿಪಿ ಹುದ್ದೆಯಲ್ಲಿ ಓಓಡಿ ಮೇಲೆ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ.
ಕಳೆದ ತಿಂಗಳು ಅ. 21ರಂದು ಧಾರವಾಡ ಎಸ್ಪಿಯಾಗಿ ವರ್ಗಾವಣೆ ಗೊಂಡ ಡಿಸಿಪಿ ಪಿ. ಕೃಷ್ಣಕಾಂತ ಬಳಿ ಹೆಚ್ಚುವರಿಯಾಗಿದ್ದ ಡಿಸಿಪಿ ಹುದ್ದೆಯಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಕೇವಲ ಧಾರವಾಡ ಎಸ್ಪಿ ಆಗಿ ಕೃಷ್ಣಕಾಂತ್ ಅವರನ್ನು ಮುಂದುವರೆಸಲಾಗಿದೆ.
ಒಂದು ಮೂಲದ ಪ್ರಕಾರ ಕೆಲವು ಕ್ಲಬ್ ಮಾಲೀಕರು ಹಿರಿಯ ರಾಜಕಾರಣಿಗಳ ಮೇಲೆ ಒತ್ತಡ ಹೇರಿ, ಈ ಆದೇಶ ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ರೀತಿಯಲ್ಲಿ ಕೃಷ್ಣಕಾಂತ್ ಅವರಿಗೆ ಸರ್ಕಾರ ದೀಪಾವಳಿ ಗಿಫ್ಟ್ ಕೊಟ್ಟಿದೆ ಅಂತ ಎಲ್ಲರೂ ಮಾತನಾಡುವ ಹಾಗೆ ಆಗಿದೆ.