ರಾಜ್ಯ

ವಿಧಾನ ಪರಿಷತ್ ಸಭಾಪತಿ ವಿರುದ್ಧ 12 ಜನ ಅವಿಶ್ವಾಸ ಮಂಡನೆ…..!

ಧಾರವಾಡ prajakiran.com : ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಪ್ರತಾಒಚಂದ್ರ ಶೆಟ್ಟಿ ವಿರುದ್ಧ 12 ಜನ ಅವಿಶ್ವಾಸ ಮಂಡನೆ ಮಾಡಿದ್ದಾರೆ.

ಹೀಗಾಗಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು ಅಂತಾ ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಅವಿಶ್ವಾಸ ಗೊತ್ತುವಳಿ ವಿಚಾರವಾಗಿ ಮಾತನಾಡಿದ ಅವರು ಜೆಡಿಎಸ್ ಪರೀಕ್ಷೆ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಅದಕ್ಕಾಗಿಯೇ ಅದೆಲ್ಲವೂ ಸದನದಲ್ಲಿ ಆಗಲಿ ಅಂತಿದ್ದಾರೆ ಎಂದರು.

ಸಭಾಪತಿಯಾದವರು ಸದನದಲ್ಲಿ ಗೌರವ ಕಡಿಮೆ ಮಾಡಿಕೊಳ್ಳಬಾರದು.
ಆದರೆ ಅಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ.

ಸಿದ್ದರಾಮಯ್ಯಗೆ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಜನರಿಗೆ ತೋರಿಸಬೇಕಿದೆ ಅಂತೆ. ಈ ಹಿಂದೆ ಕಾಂಗ್ರೆಸ್‌ನವರೇ ಬಂದು ಎಚ್ಡಿಕೆಯವರನ್ನು ಸಿಎಂ ಮಾಡುತ್ತೇವೆ ಅಂದಿದ್ದರು.

ಆದರೆ ಅವರೇ ಆಗ ಸರ್ಕಾರ ನಡೆಯಲು ಬಿಡಲಿಲ್ಲ. ಪರಿಸ್ಥಿತಿಗೆ ತಕ್ಕಂತೆ ಜೆಡಿಎಸ್ ನಿರ್ಣಯ ತೆಗೆದುಕೊಳ್ಳುತ್ತೆ.‌ ಹಾಗಂತ ಅದು ಅನುಕೂಲ ಸಿಂಧು ರಾಜಕಾರಣ ಅಲ್ಲ ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯೇ ಎಚ್‌ಡಿಕೆಗೆ ಕಾಲ್ ಮಾಡಿದ್ರು. 8 ಎಂಪಿ ಕ್ಷೇತ್ರ ತೆಗೆದುಗೊಳ್ಳಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ.

ಮತ್ತೆ ನಾಳೆ ನೀವೇ ಸಿಎಂ ಅಂದಿದ್ದರು. ಆದರೆ ಕಾಂಗ್ರೆಸ್‌ಗೆ ಗೌರವ ಕೊಡಬೇಕು ಅಂತಾ ನಾವು ಆಗ ಒಪ್ಪಲಿಲ್ಲ ಎಂದು
ಬಸವರಾಜ ಹೊರಟ್ಟಿ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *