ಹುಬ್ಬಳ್ಳಿ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವೈದಾಧಿಕಾರಿಯೊಬ್ಬರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲದೆ, ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಡಾ. ಪ್ರಭು ಬಿರಾದಾರ ಎಂಬಾತನೇ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವೈದ್ಯನಾಗಿದ್ದಾನೆ.
ಇದರಿಂದ ರೊಚ್ಚಿಗೆದ್ದ ಮಹಿಳೆ ಹಾಗೂ ಅವರ ಕುಟುಂಬಸ್ಥರು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ವೈದ್ಯನಿಗೆ ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಹಾನಗರ ಪಾಲಿಕೆಯ ಆಸ್ಪತ್ರೆ ಆವರಣದಲ್ಲಿಯೇ ವೈದ್ಯನಿಗೆ ಶುಕ್ರವಾರ ತಡರಾತ್ರಿ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.
ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಪಿಇಇ ಕಿಟ್ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಪೂರೈಸಿದ್ದ ಮಹಿಳೆಗೆ ಈ ರೀತಿಯ ದೌರ್ಜನ್ಯ ಎಸಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮಹಾನಗರ ಪಾಲಿಕೆ ಆಸ್ಪತ್ರೆಗಳಿಗೆ ಸರ್ಜಿಕಲ್ ಸಾಮಾಗ್ರಿಗಳನ್ನು ಪೂರಸಿದ ಮಹಿಳೆಗೆ ಸಲಕರಣೆ ಪೂರೈಸಿದ ಬಿಲ್ ಪಾವತಿಸಲು ಮಹಿಳೆಯನ್ನು ಈ ವೈದ್ಯ ಮೈ ಕೈ ಮುಟ್ಟಿ, ಲಾಡ್ಜ್ ಗೆ ಕರೆದಿದ್ದಾನೆ ಎಂದು ನೋಂದ ಮಹಿಳೆ ಆರೋಪಿಸಿದ್ದಾರೆ.
ಹೀಗಾಗಿ ಪರಿಸ್ಥಿತಿ ಅರಿತುಕೊಂಡ ಹುಬ್ಬಳ್ಳಿಯ ಉಪನಗರಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ವೈದ್ಯ ಪ್ರಭು ಬಿರಾದಾರನನ್ನು ಠಾಣೆಗೆ ಕರೆದೊಯ್ದರು.
ಹುಬ್ಬಳ್ಳಿಯ ಉಪನಗರ ಠಾಣೆ ಮುಂದೆ ಹುಬ್ಬಳ್ಳಿ ಸೆಂಟ್ರಲ್ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಯಿತು.
ಮಾಹಿತಿ ಅರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ ಅವರು ಠಾಣೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.