ಹುಬ್ಬಳ್ಳಿ prajakiran.com :
ಹುಬ್ಬಳ್ಳಿಯ ಹಿರಿಯ ಸಾಹಿತಿಗಳು, ಆದರ್ಶ ಶಿಕ್ಷಕರು ಆಗಿದ್ದ ಎಮ್ ಡಿ ಗೋಗೇರಿ ಭಾನುವಾರ ಬೆಳಿಗ್ಗೆ ೫.೩೦ ಕ್ಕೆ ನಿಧನ ಹೊಂದಿದರು.
ತಮ್ಮ ಹಾಡು, ಮಾತು, ಕವಿತೆಗಳಿಂದ ಧಾರವಾಡ ಜಿಲ್ಲೆಯ ಮನೆ ಮಾತಾಗಿದ್ದ ಗೋಗೇರಿ ಮಾಸ್ತರ್ ಇಹಲೋಕ ತ್ಯಜಿಸಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯೆ ಬೆಳಿಗ್ಗೆ ೯.೩೦ ಕ್ಕೆ ಹುಬ್ಬಳ್ಳಿಯ ಇಂಡಿ ಪಂಪ್ ಹತ್ತಿರ ಇರುವ ಖಬರಸ್ತಾನದಲ್ಲಿ
ಜರುಗಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ನೂರಾರು ಹಾಡು, ಕವಿತೆ ಮೂಲಕ ಗೋಗೇರಿ ಅವರು ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಅಂತಹ ಹಿರಿಯ ಜೀವ ಇನ್ನು ನೆನಪು ಮಾತ್ರ.