ಧಾರವಾಡ prajakiran.com : ಧಾರವಾಡದ ಕೆಲಗೇರಿಯ ಗಾಯತ್ರಿಪುರಂನಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ, ೨೫ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಕೇವಲ ೨ ತಾಸಿನಲ್ಲಿ ಕರಗಿಸಿದ್ದಾರೆ.
ಅದು ಮೂರು ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಕೇವಲ ೧ ಸಾವಿರ ಲೀಟರ್ ನೀರು ಬಳಸಿರುವುದು ವಿಶೇಷವಾಗಿದೆ.
ಗಣೇಶ ಕರಗಿಸಿದ ಆ ಮಣ್ಣಿನಲ್ಲಿ ಕೃಷ್ಣ ತುಳಸಿ ನೆಟ್ಟು, ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸುವ ಕಾರ್ಯ ಗುರುವಾರ ಮಾಡಿ ಜನರ ಗಮನ ಸೆಳೆದಿದ್ದಾರೆ.
ಜಲ ಮೂಲಗಳು ಮಲೀನವಾಗುವುದನ್ನು ತಡೆಯಲು ಮಂಜುನಾಥ ಹಿರೇಮಠಅವರ ಈ ಹೊಸ ಪ್ರಯತ್ನಕ್ಕೆ ಪ್ರಜಾಕಿರಣ.ಕಾಮ್ ಅಭಿನಂದಿಸುತ್ತದೆ.
ಇದೇ ವೇಳೆ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಬುಧವಾರ ಸಂಜೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ನಿರ್ಮಿಸಿದ ಮಣ್ಣಿನ ಹೊಂಡದಲ್ಲಿ 60ಕ್ಕೂ ಹೆಚ್ಚು ಗಣೇಶ ವಿಸರ್ಜನೆ ಮಾಡಲಾಯಿತು.
ಧಾರವಾಡದ ವನವಾಸಿ ರಾಮಮಂದಿರದಲ್ಲಿ ವೀರಸಾರ್ವಕರ ಗೆಳೇಯರ ಬಳಗ, ರೋಟರಿ ಕ್ಲಬ್, ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೆ ಹತ್ತು ಕಡೆ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಇಂತಹ ಪರಿಸರ ಸ್ನೇಹಿ ಕೆಲಸಗಳು ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕಿದೆ.