ಧಾರವಾಡ prajakiran.com : ಇಲ್ಲಿಯ ದೊಡ್ಡನಾಯಕನ ಕೊಪ್ಪ ಬಡಾವಣೆಯ ಬ್ರೇಂದ್ರೆ ನಗರ ಕ್ರಾಸ್ ನಲ್ಲಿ ಜ.17ರಂದು ಭಾನುವಾರ ಸಂಜೆ 6 ಗಂಟೆಗೆ ಜನಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ತಿಳಿಸಿದ್ದಾರೆ.
ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಉಪ್ಪಿನಬೆಟಗೇರಿ ಮೂರು ಸಾವಿರ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ವಹಿಸುವುದು. ಮುಖ್ಯ ಭಾಷಣಕಾರರಾಗಿ ಕನ್ನಡದ ಕಬೀರ, ಪದ್ಮಶ್ಮೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಮಾತನಾಡುವರು.
ಮುಖ್ಯಅತಿಥಿಗಳಾಗಿ ರಂಗಾಯಣ ನಿರ್ದೇಶಕ ರಮೇಶ ಎಸ್. ಪರವಿನಾಯ್ಕರ್ ಆಗಮಿಸುವರು.
ಇದರ ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾನ್ಯಾಯಾಧೀಶರಾದ ಎಸ್.ಎಚ್. ಮಿಟ್ಟಲಕೋಡ್ ಅವರು ವಹಿಸುವರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಯುವ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ತಿಳಿಸಿದ್ದಾರೆ.
ಸರಿಗಮಪ ಖ್ಯಾತಿಯ ಮೆಹಬೂಬ ಸಾಬ ಹರ್ಲಾಪೂರ ಅವರನ್ನು ಸಂಗೀತ ಕ್ಷೇತ್ರದಿಂದ, ಪತ್ರಿಕೋದ್ಯಮ ಕ್ಷೇತ್ರದಿಂದ ನಾಗರಾಜ ಕಿರಣಗಿ, ಕೈಗಾರಿಕಾ ಕ್ಷೇತ್ರದಿಂದ ಯುವ ಉದ್ಯಮಿ ಶಶಿಧರ ಮದರಕಂಡಿ, ಕೃಷಿ ಕ್ಷೇತ್ರದಿಂದ ಮಂಜುಳಾ ಸಂಗೋಳ್ಳಿ, ಕ್ರೀಡಾಕ್ಷೇತ್ರದಿಂದ ಬಸವರಾಜ ಪಠಾತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದೇ ವೇಳೆ ಮಕ್ಕಳಿಂದ ಸ್ವಾಮಿವಿವೇಕಾನಂದರ ಛದ್ಮವೇಷ ಸ್ಪರ್ಧೆ ಜರುಗಲಿದ್ದು, ಬಳಿಕ ಪ್ರಸಾದ ಪ್ರಭು ಹಾಗೂ ಅಂಜಲಿ ಮೆಹಂದಳೆ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಮಾರಂಭ ಮುಗಿದ ಬಳಿಕ ಎಲ್ಲರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು ಎಂದು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ತಿಳಿಸಿದ್ದಾರೆ.