ಧಾರವಾಡ prajakiran.com : ಅನ್ನದಾತನ ಮನೆಗೆ ಕೆಲ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಇದರಿಂದಾಗಿ ಕರಡಿಗುಡ್ಡ ಗ್ರಾಮದ
ಚನ್ನಬಸಪ್ಪ ಹನಿ ಅವರ ತೋಟದ ಮನೆಯಲ್ಲಿ ಇದ್ದ ನಾಲ್ಕು ಜಾನುವಾರುಗಳು ಸುಟ್ಟು ಕರಕಲಾಗಿವೆ.
ಇದಲ್ಲದೆ, ಅಂದಾಜು 60-70 ಚೀಲ ಹತ್ತಿ ಹಾನಿಗೀಡಾಗಿದ್ದು, ಅಪಾರ ಪ್ರಮಾಣದ ದವಸ, ಧಾನ್ಯ, ಮೇವು ಭಸ್ಮಗೊಂಡಿದೆ.
ರೈತ ಚನಬಸಪ್ಪ ಹನಿ ಅವರ ಮೇಲಿನ ಹಗೆತನಕ್ಕೆ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.