ಹುಬ್ಬಳ್ಳಿ prajakiran.com : ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿಂತಿದ್ದ ಪೊಲೀಸ್ ಕಮಿಷನರ್ ವಾಹನದ ಮೇಲೆ ಹತ್ತಿ ಗಲಭೆಕೋರರಿಗೆ ಪ್ರಚೋದನೆ ನೀಡಿದ್ದ ಮೌಲ್ವಿ ಸೇರಿದಂತೆ ಹಲವರ ಶೋಧ ಕಾರ್ಯ ಮುಂದುವರೆದಿದೆ.
ಈ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದ್ದು, ತನಿಖೆ ನಂತರ ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ದರು ಎಂಬುದರ ಬಗ್ಗೆ ಮತ್ತಷ್ಟು ಮಾಹಿತಿ ಗೊತ್ತಾಗಲಿದೆ ಎನ್ನಲಾಗಿದೆ.
ಪೊಲೀಸ್ ಕಮಿಷನರ್ ಕಾರಿನ ಮೇಲೆ ಹತ್ತಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಗಲಾಟೆ ನಡೆದ ಮಧ್ಯರಾತ್ರಿಯೇ ಹೈದರಾಬಾದ್ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.
ಗಲಾಟೆ ನಡೆದ ಮಧ್ಯರಾತ್ರಿಯೇ ವಾಸೀಂ ಪಠಾಣ್ ಹುಬ್ಬಳ್ಳಿಯಿಂದ ರೈಲಿನ ಮುಖಾಂತರ ಹೈದರಾಬಾದ್ಗೆ ತೆರಳಿದ್ದಾನೆ.
ಈತನ ಜೊತೆಗೆ ಇನ್ನೂ 8 ಮಂದಿ ಗಲಭೆಕೋರರು ಹೈದರಾಬಾದ್ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ ಬಂಧಿತರ ಪೋಷಕರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಮಕ್ಕಳು ಅಮಾಯಕರು, ಅವರನ್ನು ಬಿಡಿ ಎಂದು ಹೈಡ್ರಾಮಾ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.