ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದಾಳೆ ಎನ್ನಲಾದ ಯುವತಿ ಅಜ್ಞಾತ ಸ್ಥಳದಿಂದ ಇದೀಗ ಮೂರನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ.
ಈ ವೀಡಿಯೋ ದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.
ತಮ್ಮ ವಕೀಲ ಜಗದೀಶ್ ಅವರ ಮೂಲಕ ಈ ದೂರು ದಾಖಲಿಸಲಾಗುತ್ತದೆ.
ನಾನು ಕಳೆದ 24 ದಿನಗಳಿಂದ ಜೀವ ಭಯದಲ್ಲಿ ಬದುಕುತ್ತಿದ್ದೆ.
ನನಗೆ ಎಲ್ಲಾ ಪಕ್ಷದ ಮುಖಂಡರ ಹಾಗೂ ಸಂಘಟನೆಯ ಬೆಂಬಲದೊಂದಿಗೆ ಧೈರ್ಯ ಬಂದಿದೆ. ಹೀಗಾಗಿ ಎಲ್ಲರ ಆರ್ಶೀವಾದ ದೊಂದಿಗೆ ಕಾನೂನು ಹೋರಾಟ ನಡೆಸಲಿದ್ದೇನೆ ಎಂದು ವಿವರಿಸಿದ್ದಾಳೆ.
ಅಜ್ಞಾತ ಸ್ಥಳದಿಂದಲೇ ಈ ವಿಡಿಯೋ ಬಿಡುಗಡೆ ಮಾಡಿದ್ದು, ದೂರಿನಲ್ಲಿ ಎನೆಲ್ಲಾ ಅಂಶಗಳು ಒಳಗೊಂಡಿರುತ್ತವೆ. ಇದರಿಂದಾಗಿ ಮಾಜಿವಸಚಿವ ರಮೇಶ ಜಾರಕಿಹೊಳಿಗೆ ಎನೆಲ್ಲಾ ಸಂಕಷ್ಟ ಎದುರಾಗಲಿದೆ.
ಅವರ ವಕೀಲ ಜಗದೀಶ್ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಧ್ಯಾಹ್ನ ಎರಡು ಗಂಟೆಗೆ ಭೇಟಿಯಾಗಿ ದೂರು ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮೂರನೇ ವಿಡೀಯೋ ರಾಸಲೀಲೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.
ಇದರ ಪರಿಣಾಮ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಮಾಜಿ ಸಚಿವರ ನಡೆ ಎನಾಗಿರಲಿದೆ ಎಂಬುದು ಕಾದು ನೋಡಬೇಕು.