ಅಂತಾರಾಷ್ಟ್ರೀಯ

ರಮೇಶ ಜಾರಕಿಹೊಳಿ ವಿರುದ್ದ ದೂರು ದಾಖಲಿಸಲು ನಿರ್ಧಾರ : ಮೂರನೇ ಸಿಡಿ ಬಿಡುಗಡೆಗೊಳಿಸಿದ ಯುವತಿ

ಬೆಂಗಳೂರು prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದಾಳೆ ಎನ್ನಲಾದ ಯುವತಿ ಅಜ್ಞಾತ ಸ್ಥಳದಿಂದ ಇದೀಗ ಮೂರನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ.

ಈ ವೀಡಿಯೋ ದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.

ತಮ್ಮ ವಕೀಲ ಜಗದೀಶ್ ಅವರ ಮೂಲಕ ಈ ದೂರು ದಾಖಲಿಸಲಾಗುತ್ತದೆ.
ನಾನು ಕಳೆದ 24 ದಿನಗಳಿಂದ ಜೀವ ಭಯದಲ್ಲಿ ಬದುಕುತ್ತಿದ್ದೆ.

ನನಗೆ ಎಲ್ಲಾ ಪಕ್ಷದ ಮುಖಂಡರ ಹಾಗೂ ಸಂಘಟನೆಯ ಬೆಂಬಲದೊಂದಿಗೆ ಧೈರ್ಯ ಬಂದಿದೆ. ಹೀಗಾಗಿ ಎಲ್ಲರ ಆರ್ಶೀವಾದ ದೊಂದಿಗೆ ಕಾನೂನು ಹೋರಾಟ ನಡೆಸಲಿದ್ದೇನೆ ಎಂದು ವಿವರಿಸಿದ್ದಾಳೆ.

ಅಜ್ಞಾತ ಸ್ಥಳದಿಂದಲೇ ಈ ವಿಡಿಯೋ ಬಿಡುಗಡೆ ಮಾಡಿದ್ದು, ದೂರಿನಲ್ಲಿ ಎನೆಲ್ಲಾ ಅಂಶಗಳು ಒಳಗೊಂಡಿರುತ್ತವೆ. ಇದರಿಂದಾಗಿ ಮಾಜಿವಸಚಿವ ರಮೇಶ ಜಾರಕಿಹೊಳಿಗೆ ಎನೆಲ್ಲಾ ಸಂಕಷ್ಟ ಎದುರಾಗಲಿದೆ.

ಅವರ ವಕೀಲ ಜಗದೀಶ್ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಧ್ಯಾಹ್ನ ಎರಡು ಗಂಟೆಗೆ ಭೇಟಿಯಾಗಿ ದೂರು ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ  ಮೂರನೇ ವಿಡೀಯೋ ರಾಸಲೀಲೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.

ಇದರ ಪರಿಣಾಮ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಮಾಜಿ ಸಚಿವರ ನಡೆ ಎನಾಗಿರಲಿದೆ ಎಂಬುದು ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *