ಧಾರವಾಡ prajakiran.com : ಬಿ ಎಸ್ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಬೆಳೆಸಿ, ಸಿಎಂ ಮಾಡಿದ್ದೆ ನಾನು ಎಂದು ಹುಬ್ಬಳ್ಳಿ_ಧಾರವಾಡ ಪಶ್ಚಿಮ ಕ್ಷೇತ್ರದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಗ ಅರವಿಂದ ಬೆಲ್ಲದ ಯಡಿಯೂರಪ್ಪ ನಾಯಕತ್ವ ವಿರುದ್ದ ಸಮರ ಸಾರಿದ ಬೆನ್ನಲ್ಲೇ ತಂದೆ ಕೂಡ ಮಗನ ಬೆಂಬಲಕ್ಕೆ ನಿಂತಿದ್ದಾರೆ.
ಬಿಜೆಪಿ ಹೈಕಮಾಂಡ ಸೂಚಿಸಿದರೆ ಯಡಿಯೂರಪ್ಪ ರಾಜಿನಾಮೆ ಕೊಡೋದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ನಾನು ಮಾಧ್ಯಮಗಳಲ್ಲಿ ರಾಜ್ಯ ರಾಜಕಾರಣದ ಬದಲಾವಣೆಯ ವಿಚಾರಗಳನ್ನ ನೋಡುತ್ತಿದ್ದೇನೆ,
ರಾಜ್ಯದಲ್ಲಿ ಯಾರು ಸಮರ್ಥ ಅದಾರೆ ಯಾರಿಗೆ ಅವಕಾಶ ನೀಡಬೇಕು ಎಂಬುದು ಬಿಜೆಪಿ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.
ಬಿಜೆಪಿಯ ರಾಜಕಾರಣದಲ್ಲಿ
ಯಡಿಯೂರಪ್ಪ ಅವರನ್ನ ಯಾರು ಬೆಳೆಸಿದ್ದಾರೆ ಎಂದು ಅವರೆ ತಿಳಿದುಕ್ಕೊಳ್ಳಬೇಕು ಎಂದು ಯಡಿಯೂರಪ್ಪಗೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ
ಟಾಂಗ್ ಕೊಟ್ಟಿದ್ದಾರೆ.
ಅವರು ಮಾತು ಕೊಟ್ಟಂತೆ ಹೈಕಮಾಂಡ್ ಒಪ್ಪಿದರೆ ರಾಜಿನಾಮೆ ಕೊಡೋದು ಉಚಿತ ಎಂದ ಬೆಲ್ಲದ ಬೇರೆ ಪಕ್ಷ ದಿಂದ ಬಂದವರು ಸಚಿವ ಸ್ಥಾನ ಅಲಂಕರಿಸಿದ್ದಾರೆ ಎಂಬ ವಿಚಾರಕ್ಕೆ, ಸಂಬಂಧಿಸಿದಂತೆ ನಾನು ಮಾತನಾಡಲ್ಲ ಎಂದು ಹೇಳಿದರು.
ನನ್ನ ಮಗ ಪಕ್ಷದಲ್ಲಿ ಹಾಗೂ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾನೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ನಾನು ಕೂಡ ಬಿಜೆಪಿಯಲ್ಲಿ 5 ಬಾರಿ ಶಾಸಕರಾದ್ರೂ ಸಚಿವ ಸ್ಥಾನದಿಂದ ವಂಚಿತನಾಗಿದ್ದೆ .
ಬೆಲ್ಲದ ಕುಟುಂಬ ಮತ್ತು ಚಂದ್ರಕಾಂತ ಬೆಲ್ಲದ ಅವರ ಬಗ್ಗೆ ಎಲ್ಲ ಪ್ರತಿಪಕ್ಷಗಳಿಗೆ ಕೂಡ ಗೊತ್ತಿದೆ ಎಂದರು.
ಅರವಿಂದ ಬೆಲ್ಲದ ಅವರ ಹೆಸರು ಸಿಎಂ ರೇಸ್ ನಲ್ಲಿ ಕೇಳಿ ಬರುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಚಂದ್ರಕಾಂತ ಬೆಲ್ಲದ ಅದು ಪಕ್ಷದ ಕೆಲಸ ಅದು ಪಕ್ಷದ ನಾಯಕರು ವಿಚಾರ ಮಾಡುತ್ತಾರೆ ಎಂದು ಹೇಳಿದರು.