ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಖಂಡಿಸಿ ನಿನ್ನೇ ದಿನವೀಡಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಆರಂಭದಲ್ಲಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಆ ಬಳಿಕ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿನ್ಯಾಯಾಲಯದ ಎದುರು ಹಾಜರು ಮಾಡಲಿದ್ದಾರೆ ಎಂಬ ಮಾಹಿತಿ ಅರಿತು ಅಲ್ಲಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲಾ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿರುವುದು ಪೊಲೀಸರಿಗೆ ಕೆಲ ಕಾಲ ತಲೆ ನೋವಾಗಿತ್ತು. ಅವರನ್ನು ಸಮಾಧಾನ ಪಡಿಸಲು ಅಕ್ಷರಶಃ ಹೆಣಗಾಡಿದರು. ನ್ಯಾಯಾಲಯದ ಎದುರು ಪ್ರತಿಭಟನೆಗೆ ಕುಳಿತ ಕೈ ಕಾರ್ಯಕರ್ತರನ್ನು ಮನವೊಲಿಸಿದರು
ಇದಕ್ಕು ಮುಂಚೆ ಆಲೂರು ವೆಂಕಟರಾವ್ ವೃತ್ತದಲ್ಲಿ (ಜುಬ್ಲಿ ಸರ್ಕಲ್ನಲ್ಲಿ) ಕೈ ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಭಾವಚಿತ್ರ ಸುಟ್ಟುಹಾಕಿದರು.
ಅವರ ಹಿಂದೆಯೇ ನೂರಾರು ಜನ ಬೆಂಬಲಿಗರು ತೆರಳಿದ್ದು ಕಂಡು ಬಂತು. ಪೊಲೀಸರು ಮುಂಜಾಗ್ರತ ಕ್ರಮವಾಗಿ ಕಟ್ಟು ನಿಟ್ಟಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.