ಧಾರವಾಡ prajakiran.com : ಧಾರವಾಡದಲ್ಲಿ ಮಹಾತ್ಮಾಗಾಂಧೀಜಿವರ ಪುಣ್ಯ ಸ್ಮರಣೆಯಂದು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಕಾಂಗ್ರೆಸ್ ಪಕ್ಷದ ವತಿಯಿಂದ ಈ ನೆಲದರೈತರ ಹೋರಾಟ ಬೆಂಬಲಿಸಿ ಹಾಗೂ ಬೆಲೆಯೇರಿಕೆಗಳನ್ನು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಈ ದೇಶದ ಬೆನ್ನೆಲುಬಾದರೈತರಿಗೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆತಂಕಕಾರಿ ಕಾನೂನುಗಳನ್ನು ಜಾರಿಗೊಳಿಸಿ ಅನ್ಯಾಯ ಮಾಡುತ್ತಿವೆಎಂದು ಆರೋಪಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿರುವುದುಎದ್ದುಕಾಣುತ್ತದೆ. ಬಿಜೆಪಿ ಸರಕಾರವು ಪ್ರಜಾಪ್ರಭುತ್ವ ವಿರೋಧಿ ಆಡಳಿತವನ್ನು ನಡೆಸುತ್ತಿದೆಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ಹು-ಧಾ ಮಹಾನಗರಜಿಲ್ಲಾಕಾಂಗ್ರೆಸ್ ಐ ಸಮಿತಿಯಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರಅಧ್ಯಕ್ಷತೆಯಲ್ಲಿ ಸಾಂಕೇತಿಕಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ರಾಬರ್ಟ ದದ್ದಾಪುರಿ, ಆನಂದ ಜಾಧವ, ಸುಭಾಸ ಶಿಂಧೆ, ರಘು ಲಕ್ಕಣ್ಣವರ, ಸದಾನಂದ ಡಂಗನವರ, ಗೌರಿ ನಾಡಗೌಡ, ಸುರೇಖಾ ಮೇಧಾ, ನಾಗರಾಜ ಗುರಿಕಾರ, ಹೇಮಂತ ಗುರ್ಲಹೊಸೂರ, ಮಂಜುನಾಥ ಭೋವಿ, ಎಚ್.ಎಮ್. ರಾಜು, ಆನಂದ ಮೂಶಣ್ಣವರ, ನವೀದ ಮುಲ್ಲಾ, ಶರಣಪ್ಪಕೊಟಗಿ, ವಸಂತ ಅರ್ಕಾಚಾರಿ, ಬಸವರಾಜ ಮಲಕಾರಿ, ಜಯಂತ ಸಾಗರ, ಚಂದ್ರು ಹುಲ್ಲನ್ನವರ, ಸಾಗರ ಹಿರೇಮನಿ, ಮಹೇಶ ಹುಲ್ಲನ್ನವರ, ಸುಮಿತ್ರಾಜೈನ, ರತ್ನಾ ಮೂಲಿಮನಿ, ಸುಮಿತ್ರಾಕೋಟಕರ, ಕುಸುಮಾಜೈನ, ಪ್ರಕಾಶ ಹಳಿಯಾಳ, ಪೂಜಾ ಹಳಿಯಾಳ, ರಿಯಾಝ ನನ್ನೆಸಾಬನವರ, ಇತರರು ಉಪಸ್ಥಿತರಿದ್ದರು.